Breaking News

ಹಾಸನ

ಜಯಲಲಿತಾ ಸಮಕ್ಕೆ ಭವಾನಿ ರೇವಣ್ಣ ಫೋಟೋ

ಹಾಸನ :  ಕುಟುಂಬ ರಾಜಕಾರಣಿದಲ್ಲಿ ಟಿಕೆಟ್ ಗಾಗಿ ಬುಗಿಲೆದ್ದಿರುವ ಮಾತಿನ ಚಕಮಕಿಯಲ್ಲಿ, ಈಗ ಮತ್ತೊಂದು ಹೊಸ ರೂಪ ಪಡೆದಿದೆ. ಹಾಸನದಲ್ಲಿ ಟಿಕೆಟ್ ಗಾಗಿ ಒಂದು ಭವಾನಿ ರೇವಣ್ಣ ಪೈಪೋಟಿ ನಡೆಸುತ್ತಿದ್ದರೇ , ಮತ್ತೊಂದು ಕಡೆ ಮಾಜಿ ಶಾಸಕರ ಮಗ ಸ್ವರೂಪ್ ತಮ್ಮ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೇ ಮತದಾರರು ಹಾಗೂ ಭವಾಣಿ ರೇವಣ್ಣನವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಇತ್ತ ಕುಮಾರಸ್ವಾಮಿಗೆ ಟಾಂಗ್ ಕೊಡುವ ಕೆಲಸ ಮಾಡಿದ್ದಾರೆ. ಕರ್ನಾಟಕದ ‘ಅಮ್ಮ’.. …

Read More »

ಹಾಸನದಲ್ಲಿ ಶಾಲೆಗಳಿಗೆ 3 ದಿನ ರಜೆ ಘೋಷಣೆ

ಹಾಸನ :  ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಹಾಸನ, ಆಲೂರು ತಾಲೂಕಿನ ಶಾಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ 3 ದಿನ ರಜೆ ನೀಡಲಾಗಿದೆ. 1 ರಿಂದ 9ನೇ ತರಗತಿಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಕೋವಿಡ್ ಸಭೆ ನಡೆಸಿದ ಸಚಿವರು ಮಾಹಿತಿ ನೀಡಿ, ಆಲೂರು ತಾಲೂಕಿನ 39 ಶಾಲೆಯಲ್ಲಿ 161 ಮಕ್ಕಳಿಗೆ, ಹಾಸನದ 29 ಶಾಲೆಯ 288 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಎರಡು ತಾಲೂಕಿನ …

Read More »

ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್

ಹಾಸನ: ವೇಗವಾಗಿ ಬಂದ ಕಾರು ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗೆ ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಬಸ್ತಿಹಳ್ಳಿಯ ಮಂಜುನಾಥ್ ಗಾಯಗೊಂಡ ಬೈಕ್ ಸವಾರ. ವೇಗವಾಗಿ ಬರುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಬೈಕ್ ಸವಾರ, ಬೈಕ್ ಸಮೇತ ಕಾರಿನ ಮೇಲೆ ಜಂಪ್ ಆಗಿ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ …

Read More »

ಪೂಜಾರಿಯ ಬೆತ್ತದೇಟಿಗೆ ಮಹಿಳೆ ಮೃತಪಟ್ಟ ಆರೋಪ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಹಾಸನ : ಅನಾರೋಗ್ಯ ಪೀಡಿತ ಮಹಿಳೆಯನ್ನು ಗುಣಪಡಿಸುವ ನೆಪದಲ್ಲಿ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಾರ್ವತಿ (47) ಎಂಬುವರು ಮೃತಪಟ್ಟ ಮಹಿಳೆ. ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ.ಹೀಗಾಗಿ, ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಹಿರಿಯಾಪಟ್ಟಣದಮ್ಮ ದೇವರ ಪೂಜಾರಿ ತಿಳಿಸಿದ್ದನಂತೆ. ನಂತರ ಪೂಜೆ …

Read More »

ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧ ಹರಿಯಾಣದಲ್ಲಿ ಆತ್ಮಹತ್ಯೆ

ಹಾಸನ: ಜೀವನದಲ್ಲಿ ಜಿಗುಪ್ಸೆಯನ್ನ ಹೊಂದಿದ ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧರಬ್ಬರು ಹರಿಯಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಕದಾಲು ಗ್ರಾಮದವರಾದ ಮೋಹನ್ ಕುಮಾರ್ ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಗೃಹಸ್ಥಶ್ರಮಕ್ಕೆ ಕಾಲಿಟ್ಟಿದ್ರು.ಆದ್ರೆ ಮೋಹನ್ ಕುಮಾರ್ ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ …

Read More »

ಕೆಎಸ್​ಆರ್​ಟಿಸಿ-ಕಾರು ನಡುವೆ ಡಿಕ್ಕಿ; ನಾಲ್ವರ ದುರ್ಮರಣ

ಹಾಸನ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಕಾರು​ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಕಲೇಶಪುರ ತಾಲೂಕು ಮಾರನಹಳ್ಳಿ ಬಳಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಬಸ್​ಗೆ ಸಕಲೇಶಪುರದ ಕಡೆಯಿಂದ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಹೆತ್ತವರಿಗೇ ಬೇಡ್ವಾದ ಅನಾಥರಿಗೆ ದೇವರಾಗಿ ಬಂದ ಅಮೆರಿಕಾ ಮಾತೆ!

ಹುಟ್ಟು ಹಬ್ಬ ಆಚರಿಸಬೇಕಾದ ಹೆತ್ತವರು ಅವರನ್ನ ಪೊದೆಯಲ್ಲಿ ಬಿಸಾಕಿದ್ರು. ಆದ್ರೇ ತವರಿನ ಮಡಿಲು ಇವರನ್ನ ರಕ್ಷಿಸಿ ಮರು ಜೀವ ನೀಡಿತ್ತು. ಆ ಜೀವಗಳಿಗೆ ಇಂದು ವರುಷದ ಸಂಭ್ರಮ. ಆ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ತವರು ಚಾರಿಟಬಲ್ ಟ್ರಸ್ಟ್. ತನಗರಿವಿಲ್ಲದಂತೆ ಆಟವಾಡುತ್ತಿರುವ ಮತ್ತು ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಅನಾಥ ಮಕ್ಕಳಿಬ್ಬರ ಹುಟ್ಟುಹಬ್ಬ ಆಚರಣೆ. ಅಮೇರಿಕಾ ಪ್ರಜೆಗಳಿಬ್ಬರು ದತ್ತು ಪಡೆದು ಹೊಸ ಜೀವನ ನೀಡಿದ ಕ್ಷಣ. ಈ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾದರು ಜಿಲ್ಲಾಧಿಕಾರಿ ರೋಹಿಣಿ …

Read More »

You cannot copy content of this page