Breaking News

ಚಿಕ್ಕಮಗಳೂರು

ಕಾಡುಕೋಣ ತಿವಿದು ವ್ಯಕ್ತಿಯೋರ್ವ ಸಾವುಚಿಕ

ಕಳಸ,(ಚಿಕ್ಕಮಗಳೂರು): ತಾಲೂಕಿನ ತೋಟದೂರು ಸಮೀಪ ಕಾಡುಕೋಣ ತಿವಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸೋಮಶೇಖರ್ (45) ಮೃತ ವ್ಯಕ್ತಿಯಾಗಿದ್ದು, ಇವರು ಕೊಪ್ಪ ತಾಲೂಕಿನ ಜಯಪುರ ನಿವಾಸಿ ಎಂದು ತಿಳಿದು ಬಂದಿದೆ. ಇವರು ತೋಟದೂರು ಗ್ರಾಪಂ ವ್ಯಾಪ್ತಿಯ ಕುಳಿಹಿತ್ತಲು ಎಂಬ ಗ್ರಾಮದಲ್ಲಿ ಅರ್ಧ ಎಕರೆಯಷ್ಟು ಜಮೀನು ಹೊಂದಿದ್ದು, ಗುರುವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟಕ್ಕೆ ನುಗ್ಗಿ ಬಂದ ಕಾಡುಕೋಣ ಸೋಮಶೇಖರ್ ಅವರ ಮೇಲೆ ದಿಢೀರ್ ದಾಳಿ …

Read More »

ಚಿಕ್ಕಮಗಳೂರುಗೆ ಸಿಎಂ ಭೇಟಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಂದು ಚಿಕ್ಕಮಗಳೂರು ಪ್ರವಾಸ ಮಾಡಲಿದ್ದು, ಜನಸಂಕಲ್ಪ ಯಾತ್ರೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಡೂರು-ತರೀಕೆರೆ ತಾಲೂಕಿನಲ್ಲಿ ಸಿಎಂ ಪ್ರವಾಸ ಮಾಡಲಿದ್ದು, ಮೊದಲು ಕಡೂರು ಪಟ್ಟಣದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 10:30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಕಡೂರಿಗೆ ಆಗಮಿಸಲಿದ್ದಾರೆ. ಬಿಎಸ್ ವೈ ಸಿಎಂ ಆಗಿದ್ದಾಗ ನೀರಾವರಿ ಯೋಜನೆಗೆ ಅನುದಾನ ನೀಡಲಾಗಿತ್ತು. 108 ಕೆರೆಗಳಿಗೆ ನೀರು ತುಂಬಿಸಲು 1289 ಕೋಟಿ ಬಿಡುಗಡೆ ಮಾಡಲಾಗಿತ್ತು. ಆ …

Read More »

ರೇಣುಕಾಚಾರ್ಯ ಅವರ ಸಹೋದರನ ಪುತ್ರನಿಗೆ ಕಿವಿಮಾತು ಹೇಳಿದ ಗುರೂಜಿ

ಚಿಕ್ಕಮಗಳೂರು : ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಗುರುವಾರದಂದು ಶವವಾಗಿ ಪತ್ತೆಯಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ಕಾಲುವೆಗೆ ಬಿದ್ದಿದ್ದು, ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. ಇದರ ಮಧ್ಯೆ ಅಕ್ಟೋಬರ್ 30ರಂದು ಚಂದ್ರಶೇಖರ್, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ರಾತ್ರಿ 9:00 ಗಂಟೆ ಸುಮಾರಿಗೆ ತೆರಳಿದ್ದರು ಎನ್ನಲಾಗಿದ್ದು, ಆಶ್ರಮದ ಮೂಲಗಳು ಸಹ …

Read More »

ಗಣಪತಿ ವಿಸರ್ಜಿಸಿ ವೇಳೆ ವಿದ್ಯುತ್ ತಗಲಿ 3 ಜನ ಸಾವು

ಚಿಕ್ಕಮಗಳೂರು : ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ಪೆಂಡಾಲ್ ಗೆ ವಿದ್ಯುತ್ ತಂತಿ ತಗುಲಿ ರಾಜು (47) ರಚನಾ (35) ಪಾರ್ವತಿ (26) ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನಿಸಲಾಗಿದೆ. ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ …

Read More »

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಚಿಕ್ಕಮಗಳೂರು: ಇವರೊಬ್ಬರಿಗೇನಾ ರಾಜಕೀಯ ಮಾಡೋಕೆ ಬರೋದು? ನಮಗೂ ಬರುತ್ತೆ. ಇವರಿಗಷ್ಟೇನಾ ಕಾರ್ಯಕರ್ತರು ಇರೋದು? ನಮಗೂ ಇದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ನವರ ಗೊಡ್ಡುಬೆದರಿಕೆಗೆ ಬಗ್ಗಲ್ಲ ನಾನು. ಕಾಂಗ್ರೆಸ್​ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು. ಮಳೆ ಹಾನಿಪೀಡಿತ ಪ್ರದೇಶಗಳ ವೀಕ್ಷಣೆಗೆಂದು ನಿನ್ನೆ(ಗುರುವಾರ) ಕೊಡಗು ಜಿಲ್ಲೆಗೆ ಪ್ರವಾಸ ಹೋದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಜನರಲ್​ ತಿಮ್ಮಯ್ಯ ಸರ್ಕಲ್​ ಬಳಿ ಸಿದ್ದು …

Read More »

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್

ಇಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ದತ್ತಪೀಠದ ಅತ್ತಿಗುಂಡಿ ಸಮೀಪ ಎಸ್‌ಎಂಎಸ್ ನಲ್ಲಿ ಮೂವತ್ತರಿಂದ ನಲವತ್ತು ಜನರಿಗೆ ಗಂಭೀರ ಗಾಯಗಳಾಗಿವೆ. ನಗರದ ಜಿಲ್ಲಾಸ್ಪತ್ರೆಗೆ ಎಲ್ಲರನ್ನು ದಾಖಲು ಮಾಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.

Read More »

ವಿವಾಹಿತೆ, ಯುವಕನ ಹುಚ್ಚು ಪ್ರೀತಿ ಸಾವಿನಲ್ಲಿ ಅಂತ್ಯ

ಚಿಕ್ಕಮಗಳೂರು: ವಿವಾಹಿತೆ ಮತ್ತು ಯುವಕನ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ 36 ವರ್ಷದ ಲತಾ ಮತ್ತು ಹೊಸದುರ್ಗ ತಾಲೂಕು ಬೆಲಗೂರಿನ ಲಕ್ಷ್ಮಿಕಾಂತ್(31) ಮೃತಪಟ್ಟವರು ಘಟನೆ ನಡೆದಿದೆ. 15 ದಿನಗಳ ಹಿಂದೆ ಲಕ್ಷ್ಮಿಕಾಂತ್ ಊರಿಗೆ ಬಂದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಲತಾ ತವರು ಮನೆಗೆ ಹೋಗಿದ್ದಾರೆ.ಫೆ. 7ರಂದು ಲಕ್ಷ್ಮಿಕಾಂತ್ ಮತ್ತು ಲತಾ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಬುಧವಾರ ಕಡೂರು ತಾಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇಗುಲದ ಸಮೀಪದ …

Read More »

ಚಿಕ್ಕಮಗಳೂರುನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಪ್ರತಿಭಟನೆ ಯಶಸ್ವಿ

ಚಿಕ್ಕಮಗಳೂರು: ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಕರೆ ನೀಡಿದ್ದ ನಗರ ಬಂದ್ ಭಾಗಶಃ ಯಶಸ್ವಿಯಾಯಿತು. ದಲಿತ ಸಂಘರ್ಷ ಸಮಿತಿ, ಬಿವಿಎಸ್, ಎಸ್‌ಡಿಪಿಐ, ಹಜರತ್ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಸಂಘದ ಕಾರ್ಯಕರ್ತರು ಬೆಳಿಗ್ಗೆಯೇ ರಸ್ತೆಗಿಳಿದು ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಿದರು.ಅಂಗಡಿ ಮುಂಗಟ್ಟು ತೆರೆಯದಂತೆ ಮಾಲೀಕರಿಗೆ ಮನವಿ ಮಾಡಿ, ಬಾಗಿಲು ಮುಚ್ಚಿಸಿದರು. ನಗರದ ಐಜಿ ರಸ್ತೆ, ಎಂ.ಜಿ ರಸ್ತೆ, …

Read More »

22 ವರ್ಷ ಬಳಿಕ ತಾಯಿ ಮಡಿಲು ಸೇರಿಗ ಮಗಳು

ಚಿಕ್ಕಮಗಳೂರು : ಇದು ಅಪರೂಪದಲ್ಲಿ ಅಪರೂಪದ ಘಟನೆ. ಅವರಿಬ್ಬರ ಮಧ್ಯೆ 22 ವರ್ಷಗಳ ಕಾಲ ಯಾವುದೇ ಸಂಪರ್ಕ ಇರಲ್ಲ, ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ ಅಂದ್ರೆ ಕಲ್ಪನೆ ಮಾಡೋದಕ್ಕೂ ಸಾಧ್ಯವಿಲ್ಲ ಅಲ್ವಾ..? ಆದ್ರೆ ಕಾಫಿನಾಡಿನಲ್ಲಿ ನಡೆದ ಅದೊಂದು ಸ್ಟೋರಿ ನಿಜಕ್ಕೂ ಅದೆಂತಹ ಫಿಲ್ಮಿ ಸ್ಟೋರಿಯನ್ನೂ ಕೂಡ ಮೀರಿಸುತ್ತೆ.. ಇಂತದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮ. ಸಿನಿಮಾದಲ್ಲೂ  ಈ ರೀತಿಯ ಸನ್ನಿವೇಶ ನೋಡೋದು ತುಂಬಾ …

Read More »

ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್​ಡೌನ್ ಅನಿವಾರ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್​ಡೌನ್ ಅನಿವಾರ್ಯವಾಗಲಿದೆಯಂತ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ಕರೊನಾ ನಿಯಂತ್ರಣ ಮಾಡುವ ಸಲುವಾಗಿ ಜನತೆ ನೆರವು ನೀಡದೇ ಹೋದಲ್ಲಿ, ಲಾಕ್‌ಡೌನ್‌ ಮಾಡುವುದು …

Read More »

You cannot copy content of this page