Breaking News

ನದಿಯಲ್ಲಿ ಈಜಲು ಹೋದವರು ನೀರುಪಾಲು

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯ ಪಂಪಹೌಸ್ ಬಳಿಯ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.ಹೊಸವರ್ಷದ ನಿಮಿತ್ತ ಪಾರ್ಟಿ ಮಾಡಲು ಹೊಗಿದ್ದ ಈ  ಯುವಕರು ಈಜು ಬಾರದೆ ನದಿ ಪಾಲಾಗಿದ್ದಾರೆ. ಈ ಮೂವರ ಗುರುತು ಪತ್ತೆಹಚ್ಚಿದ್ದು .ನವೀನ್ ಕುರಗುಂದ 20 ವರ್ಷ, ವಿಕಾಸ ಪಾಟೀಲ್ 20 ವರ್ಷ, ಹಾಗು  ನೆಪಾಳದ ಮೂಲದ ಪ್ರೇಮ್ ಬೋರಾ 25 ವರ್ಷದ ಯುವಕ ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಪೋಲಿಸರು ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು .ಈಗಾಗಲೇ ವಿಕಾಸ ಮೃತ ದೇಹ ಪತ್ತೆಯಾಗಿದ್ದು.ಇನ್ನಿಬ್ಬರ ಮೃತ ದೇಹದ ಶೋಧ ಕಾರ್ಯ ಮುಂದುವರೆದಿದೆ.

Share News

About BigTv News

Check Also

ಪ್ರಕೃತಿಯ ನಿರ್ಲಕ್ಷ್ಯ: ಕಾಂಕ್ರಿಟ್ ಕಾಡುಗಳ ನಿರ್ಮಾಣ

ಹುಬ್ಬಳ್ಳಿ: ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಆದರೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು …

Leave a Reply

Your email address will not be published. Required fields are marked *

You cannot copy content of this page