Breaking News

ತಡರಾತ್ರಿ ಮನೆಗೆ ಬಂದ ಅತಿಥಿ: ದಂಗಾದ ಕುಟುಂಬಸ್ಥರು

ತುಮಕೂರು: ಆಹಾರ ಹರಸಿ ಗ್ರಾಮಕ್ಕೆ ಬಂದ ಚಿರತೆಯೊಂದು ಮನೆಯೊಳಗೆ ನುಗ್ಗಿ ಕುಟುಂಬಸ್ಥರನ್ನ ಬೆಚ್ಚಿ ಬೀಳಿಸಿದೆ.  ತುಮಕೂರು‌ ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮುದ್ದಲಿಂಗಯ್ಯನ ದೊಡ್ಡಿ ಗ್ರಾಮದಲ್ಲಿ ಘಟನೆ ನಡದಿದೆ. ತಡರಾತ್ರಿ ಗ್ರಾಮದ ಶಿವಣ್ಣ ಎಂಬುವರ ಮನೆಗೆ ಚಿರತೆ ನುಗ್ಗಿದ್ದು ಕುಟುಂಬಸ್ಥರು ದಂಗಾಗಿದ್ದಾರೆ‌. ಕೂಡಲೇ ಶಿವಣ್ಣ ಕುಟುಂಬದವರು ಮನೆಯ ಹೊರಗೆ ಓಡಿ ಬಂದು ಬಾಗಿಲು ಹಾಕಿಕೊಂಡಿದ್ದಾರೆ‌. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ ಚಿರತೆಗೆ ಅರವಳಿಕೆ‌ ಮದ್ದು‌ನೀಡಿ ಸೆರೆ ಹಿಡಿದಿದ್ದಾರೆ‌. ಚಿರತೆ ಸೆರೆಯಿಂದ ಶಿವಣ್ಣ ಕುಟುಂಬಸ್ಥರು, ಗ್ರಾಮಸ್ಥರು‌ನಿಟ್ಟುಸಿರು ಬಿಟ್ಟಿದ್ದಾರೆ. ಹುಲಿಯೂರು ದುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ..ಮುಖ್ಯಮಂತ್ರಿಗಳನ್ನ ಕೇಂದ್ರ ಸರ್ಕಾರ ರಾಜೀನಾಮೆ ಪಡೆಯಬೇಕು….

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮಹಾಜನ್ ವರದಿ 1956 ರಲ್ಲಿ ಅರ್ಜಿ ಸಲ್ಲಿಕೆಯಾಗಿದೆ.ನಾವು ಅದನ್ನ ಒಪ್ಪಿಕೊಂಡಿದ್ದೇವೆ …

Leave a Reply

Your email address will not be published. Required fields are marked *

You cannot copy content of this page