ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿದ್ದು, ಪುಸ್ತಕ ಬಿಡುಗಡೆ, ಮಾರಾಟ, ಮಾಧ್ಯಮ ಪ್ರಸಾರಕ್ಕೆ ತಡೆ ಹೇರಿದ್ದಾರೆ. ಸಿದ್ದು ನಿಜ ಕನಸುಗಳು ಪುಸ್ತಕ ಇಂದು ರಿಲೀಸ್ ಆಗಬೇಕಿದ್ದು, ಟೌಲ್ಹಾಲ್ನಲ್ಲಿ ಪುಸ್ತಕ ಬಿಡುಗಡೆ ನಿಗದಿಯಾಗಿತ್ತು.
ಈ ಪುಸ್ತಕ ಸಿದ್ದರಾಮಯ್ಯ ಕುರಿತು ರಚನೆಯಾಗಿತ್ತು. ಪುಸ್ತಕದಲ್ಲಿ ಸಿದ್ದು ತೇಜೋವಧೆ ಮಾಡಿರೋ ಆರೋಪವಾಗಿದೆ.
ಸಿದ್ದರಾಮಯ್ಯರನ್ನ ಕೆಟ್ಟದಾಗಿ ಬಿಂಬಿಸಿದ್ದಾರೆಂದು ಆರೋಪ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಪುಸ್ತಕ ರಿಲೀಸ್ ಮಾಡದಂತೆ ಮೊರೆ ಕಾಂಗ್ರೆಸ್ ಹೋಗಿದ್ದರು. ಈ ಮಧ್ಯೆ ಟೌನ್ಹಾಲ್ ಬಳಿ ಭಾರೀ ಹೈಡ್ರಾಮಾ ನಡೆದಿದೆ.
