Breaking News

ಎ ಪಿ ಎಮ್ ಸಿ ಯಲ್ಲಿ ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳ್ಳಿಗ್ಗೆ ಮತ್ತೆ ಚಾಕು ಮಾರಕಾಸ್ತ್ರಗಳು ಸದ್ದು ಮಾಡಿವೆ. ಸದಾ ರೈತರು ಹಾಗೂ ಗ್ರಾಹಕರು ಒಂದೇ ಕಡೆ ಸೇರುವ ನವನಗರದ ಎ ಪಿ ಎಮ್ ಸಿ ಯಲ್ಲಿ ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ‌ ಪರಾರಿ ಆಗಿದ್ದಾರೆ.

ನವನಗರದ ಎ ಪಿ ಎಂ ಸಿ ಯಲ್ಲಿ ಮುಂಜಾನೆ ಅಪ್ತಾಬ ಎಂಬ ಯುವಕ ತನ್ನ ಸಹೋದರ ಹಾಗು ಅಳಿಯನ ಜೊತೆಯಲ್ಲಿ ತರಕಾರಿ ವ್ಯಾಪಾರ ಮಾಡುತಿದ್ದಾಗ ಪಕ್ಕದ ಅಂಗಡಿಯ ಮಾಲಿಕ ಮೌಲಾ , ತಾಜು ಸಹಿತ ನಾಲ್ಕು ಐದು ಜನರ ಗುಂಪು ಏಕಾ ಏಕಿ ಚಾಕು ಹಾಗು ಮಾರಕಾಸ್ತ್ರಗಳಿಂದ ಗಾಂಜಾ ಮತ್ತಿನಲ್ಲಿ ಯುವಕರ ಮೇಲೆ ಚಾಕು ಬಾಟಲಿಗಳಿಂದ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ದೃಶ್ಯ ಸಿ ಸಿ ಟಿವಿಯಲ್ಲಿ ಸೇರೆಯಾಗಿದೆ. ಇನ್ನು ಆರೋಪಿಗಳು ಪರಾರಿ ಆಗಿದ್ದು, ಹಲ್ಲೆಗೆ ಒಳಗಾದ ಮೂವರನ್ನು‌ ಅಲ್ಲೆ ಇದ್ದ ಸ್ಥಳಿಯರು ಚಿಕಿತ್ಸೆ ಗಾಗಿ ಕೀಮ್ಸ್ಗೆ ದಾಖಲಿಸಿದ್ದು , ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಇನ್ನು ಈ ಕುರಿತು ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಡಿಗೇರಿ ಪೋಲೀಸ್ ಪವರ್ ; 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…

28ವರ್ಷಕ್ಕೆ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ..!! 28 ವರ್ಷದ ಕಳ್ಳಾಟಕ್ಕೆ ಫುಲ್ ಸ್ಟಾಪ್ ಆರೋಪಿ ಅಂದರ್ ಮಾಡಿದ ಪೋಲಿಸ್ …

Leave a Reply

Your email address will not be published. Required fields are marked *

You cannot copy content of this page