ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಧಾರವಾಡ ಸಾಮಾನ್ಯ ಸಭೆಗೆ ಖಾಲಿ ಕೊಡದೊಂದಿಗೆ ಆಗಮಿಸಿದ ಕಾಂಗ್ರೆಸ್ ಪಾಲಿಕೆಯ ಸದಸ್ಯರು. ಕಳೆದ ೨೦ ದಿನಗಳಿಂದ ಜಲ ಮಂಡಳಿ ನೌಕರರಿಂದ ನಡೆದಿರುವ ಪ್ರತಿಭಟನೆ ಬೆಂಬಲಿಸಿ ಬಂದಿದ್ದ ಕಾಂಗ್ರೆಸ್ ಸದಸ್ಯರು ಈ ವೇಳೆ ಖಾಲಿ ಕೊಡ ಹಿಡಿದು ಸಭೆಗೆ ನುಗ್ಗಲು ಯತ್ನಿಸಿದಾಗ ಒಳಗೆ ಬರದಂತೆ ಬಿಜೆಪಿ ಸದಸ್ಯರು ತಳ್ಳಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ತೀವ್ರತೆಗೆ ಹೋದಾಗ ತಳ್ಳಾಟದ ವೇಳೆ ಪಾಲಿಕೆ ಸದಸ್ಯೆರಿಗೂ ಮತ್ತು ಕಾಂಗ್ರೆಸ್ ಸದಸ್ಯೆರಿಗೂ ಪೆಟ್ಟಾಗಿದೆ. ಹಾಗೆ ತಳ್ಳಾಟದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಧುರಾಜ್ ಮನಿಕುಂಟ್ಲಗೆ ಕಳೆಗೆ ಬಿದ್ದು ಗಾಯಗೊಂಡಿದ್ದಾರೆ. 8 ದಿನಗಳಿಂದ ನೀರು ಬಿಟ್ಟಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶದಿಂದಾ ಈ ರೀತಿ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಡೆಸಿದ್ದು, ಪ್ರತಿಭಟನೆಯ ವಿರುದ್ಧ ಬಿಜೆಪಿ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಪಕ್ಷದ ಸದಸ್ಯರ ನಡುವೆ ವಾಕ್ಸಮರ ಉಂಟಾಗಿ ಸಭೆಯನ್ನಾ ಮುಂದೂಡಲಾಗಿದೆ.
