Breaking News

ಕುಂದಗೋಳ ಕ್ಷೇತ್ರದ ಜನರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್

ಕುಂದಗೋಳ ಪಟ್ಟಣದ ಮರಾಠಾ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ ಭಾಗಿಯಾಗಿದ್ದು, ಗ್ಯಾರಂಟಿ ಕಾರ್ಡ್ ವಿತರಿಸಿದರು. ಕಾಂಗ್ರೆಸ್ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿದೆ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಾಲು ಸಾಲು ಭಾಗ್ಯಗಳು ನಿಮ್ಮ ಮನೆ ತಲುಪಲಿವೆ ಎಂದು ಹೇಳಿದರು. ನಂತರ ಇಲ್ಲಿ ನೂರಾರು ಮಹಿಳೆಯರು ಸೇರಿದ್ದಿರಿ ನಿಮಗೆ ಎಲ್ಲರಿಗೂ ನಾವು ಕಾಂಗ್ರೆಸ್ ಪಕ್ಷದ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ಹಾಗೂ 10 ಕೆಜಿ ಅಕ್ಕಿ ವಿತರಣೆ ಕಾರ್ಡ್ ಕೊಡುತ್ತೇವೆ, ನೀವೆ ನಿಮ್ಮ ಕುಟುಂಬದವರಿಗೆ ಕಾಂಗ್ರೆಸ್ ಕೊಡುಗೆ ಬಗ್ಗೆ ತಿಳಿಸಿರಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕ್ಷೇತ್ರದ ಜನರು ಹಾಗೂ ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share News

About admin

Check Also

ಮದುವೆಗೂ ಮುಂಚೆ ಮಗು… ಆ ಮಗುವನ್ನ ಮಾರಿದ್ರಾ..? ಮರೆಮಾಚಿದ್ರಾ..? ಈಗ ಮಗು ಎಲ್ಲಿದೆ ಎಂಬ ಪ್ರಶ್ನೆ ಹುಬ್ಬಳ್ಳಿಯನ್ನು ಕಾಡುತ್ತಿದೆ..!

ಮದುವೆಗೆ ಮುಂಚೆಯೇ ತಾಯಿಯಾದ ಯುವತಿ… ಹುಟ್ಟಿದ ಮಗುವಿಗೆ ಏನಾಯ್ತು..? ಮಾರಾಟವಾಯ್ತಾ ಅಥವಾ ಬೆಚ್ಚಿಬೀಳಿಸುವ ರಹಸ್ಯ..! ಮದುವೆಗೂ ಮುಂಚೆ ಮಗು… ಬಳಿಕ …

Leave a Reply

Your email address will not be published. Required fields are marked *