Breaking News

ರಾಮಲಿಂಗ ಕಾಮದೇವರ ಮರುಪ್ರತಿಷ್ಠಾಪನೆ

ನವಲಗುಂದ : ಹೋಳಿ ಹುಣ್ಣಿಮೆಯಲ್ಲಿ ದಹನವಾದ ಶ್ರೀರಾಮಲಿಂಗ ಕಾಮದೇವರು ಯುಗಾದಿಯ ದಿನ ಈ ಪಟ್ಟಣದಲ್ಲಿ ಮರುಜನ್ಮ ಪಡೆಯಲಿದ್ದಾನೆ. ಬಾಲ ಕಾಮಣ್ಣ ಕುಳಿತ ಭಂಗಿಯಲ್ಲಿ ಯುಗಾದಿ ಪಾಡ್ಯದ ದಿನದಂದು ಮರುಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

ಪಟ್ಟಣದಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯದಲ್ಲಿ ಭಕ್ತರು ಭಾಗಿಯಾಗುತ್ತಾರೆ. ಪೂಜೆ ಸಲ್ಲಿಸುತ್ತಾರೆ. ಬಾಲ ಕಾಮಣ್ಣನ ಮೂರ್ತಿಯನ್ನು ಕಂಡು ಸಂಭ್ರಮಿಸುತ್ತಾರೆ. ಇನ್ನೂ ಶ್ರೀರಾಮಲಿಂಗ ಕಾಮದೇವರನ್ನು ನಾಳೆ ಮಾರ್ಚ 22 ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಪ್ರತಿಷ್ಠಾಪನೆ ಮಾಡಿ ರಾತ್ರಿ 9 ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ತರಹದ ಸಿದ್ಧತೆ ಟ್ರಸ್ಟ್ ಕಮೀಟಿ ಮಾಡಿಕೊಂಡಿದೆ.

Share News

About BigTv News

Check Also

ನನ್ನ ಮೇಲೆ ಹನಿಟ್ರ್ಯಾಫ್ ಗೆ ಯತ್ನ ; ಸಚಿವ ರಾಜಣ್ಣ

ಕರ್ನಾಟಕ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಫ್ ಬಲೆಗೆ ಬಿಳಿಸುವ ಯತ್ನ ನಡೆದಿದೆ ಏನೋ ಸುದ್ದಿ ಬಾರಿ ಸದ್ದು ಮಾಡಿದ್ದು. ಸಹಕಾರ ಸಚಿವ …

Leave a Reply

Your email address will not be published. Required fields are marked *

You cannot copy content of this page