Breaking News

ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಮಪತ್ರ ಸಲ್ಲಿಕೆ

ಮಾಜಿ ಸಿಎಂ ಜಗದೀಶ ಶೆಟ್ಟರ್

ಹುಬ್ಬಳ್ಳಿ ಧಾರವಾಡ : ಕ್ಷೇತ್ರ ವಿಧಾನ ಪರಿಷತ್ (ಎಮ್.ಎಲ್.ಸಿ) ಚುನಾವಣೆ ಹಿನ್ನೆಲೆ,ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಸಲವೂ ನಾವೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದೇವೆ .

ಈ ಸಲವೂ ಬಿಜೆಪಿ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ.ಈಗಾಗಲೇ 8 ಜಿಲ್ಲೆಗಳಲ್ಲಿ ಜನಸ್ವರಾಜ್ ಯಾತ್ರೆ ಮಾಡಿದ್ದೇವೆಪ್ರವಾಸ ಮಾಡಿದ ಕಡೆಯಲ್ಲ ಬಿಜೆಪಿಗೆ ಒಳ್ಳೆ ಜನ ಬೆಂಬಲ ಸಿಗುತ್ತಿದೆನಮ್ಮ ಸಂಘಟನೆ, ಶಕ್ತಿ ಕಡಿಮೆ ಇದ್ದ ಕಡೆಗಳಲ್ಲಿಯೂ ಈ ಬಾರಿ ಖಾತೆ ತೆರೆಯುತ್ತೇವೆ.

25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರ ಬಿಜೆಪಿ ಗೆಲುವು ಸಾಧಿಸಲಿದೆ.ದ್ವಿ ಸದಸ್ಯದ ಕ್ಷೇತ್ರಗಳಲ್ಲಿ ಒಂದೇ ಅಭ್ಯರ್ಥಿ ಸ್ಪರ್ಧೆ ವಿಚಾರಹಿಂದಿನ ಎರಡೂ ಚುನಾವಣೆಯಲ್ಲಿಯೂ ನಾವೂ ಅನುಭವ ಪಡೆದಿದ್ದೇವೆ.ಹೀಗಾಗಿ ಇಲ್ಲಿ ದ್ವೀಸದಸ್ಯ ಕ್ಷೇತ್ರಗಳಲ್ಲಿಯೂ ಒಂದೇ ಅಭ್ಯರ್ಥಿ ಹಾಕಿದ್ದೇವೆ

ಎರಡು ಅಭ್ಯರ್ಥಿ ನಿಲ್ಲಿಸಿದ್ದಾಗ ಗೊಂದಲಗಳು ಸಹಜವಾಗಿಯೇ ಹೆಚ್ಚಾಗುತ್ತವೆ.ಈ ಪ್ರಯೋಗ ಈಗಾಗಲೇ ನಾವೂ ಮಾಡಿ ನೋಡಿದ್ದೇವೆ.ಹಿಂದೇ ನಡೆದ ಪ್ರಯೋಗದಲ್ಲಿ ಒಬ್ಬರೇ ಆಯ್ಕೆ ಯಾಗಿ ಬಂದಿದ್ದಾರೆ.ಹೀಗಾಗಿ ಒಬ್ಬರನ್ನೇ ನಿಲ್ಲಿಸುವ ನಿರ್ಧಾರವನ್ನ ನಾವೆಲ್ಲರೂ ಮಾಡಿದ್ದೇವೆ.

Share News

About admin

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *