Breaking News

ವಿಧಾನ ಸಭಾ ಚುನಾವಣೆಗೆ ಸಜ್ಜಾದ ಬಸವರಾಜ್ ಬೊಮ್ಮಾಯಿ v/s ವಿನಯ ಕುಲಕರ್ಣಿ

ಧಾರವಾಡ : ಸಿಎಂ ವಿರುದ್ಧ ಶಿಗ್ಗಾವಿಯಲ್ಲಿ ಸ್ಪರ್ಧೆಗಿಳಿತಾರಾ ವಿನಯ ಕುಲಕರ್ಣಿ ಎಂಬ ಹಲವು ಗೊಂದಲಗಳಿಗೆ ವಿನಯ್ ಕುಲಕರ್ಣಿ ತೆರೆ ಏಳೆದಿದ್ದಾರೆ. ಎಲ್ಲವೂ ವದಂತಿ ಎನ್ನುವಾಗಲೇ ವಿನಯ ಕುಲಕರ್ಣಿ ಮಹತ್ವದ ಹೇಳಿಕೆ ಕೊಟ್ಟಿದಾರೆ. ಕಾಂಗ್ರೇಸ್ ಪಕ್ಷ ನಡೆಸಿದ ಹಲವು ಆಂತಾರಿಕ ಚುನಾವಣೆ ಸಮಿಕ್ಷೇಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ವಿನಯ ಹೆಸರು ಮುಂಚೂಣಿಯಲ್ಲಿದೆ. ಇದಕ್ಕೆ ಸ್ಪಷ್ಟನೆ ನೀಡಿದ ವಿನಯ್ ಕುಲಕರ್ಣಿ ಸರ್ವೆಯಲ್ಲಿ ನನ್ನ ಹೆಸರು ಕೇಳಿ ಬಂದಿತ್ತು, ಆಗ ಮುಖಂಡರು ಕೂಡ ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಶಿಗ್ಗಾವಿದಲ್ಲಿ ಸ್ಪರ್ಧಿಸುವುದಿಲ್ಲ. ಅಲ್ಲಿ ಹಲವಾರು ಜನ ಆಕಾಂಕ್ಷಿಗಳಿದ್ದಾರೆ. ಅವರ ಮನಸ್ಸಿಗೆ ನೋವು ಮಾಡಿ ನಾನು ಹೋಗುವುದು ಸರಿಯಲ್ಲ. ಆ ಕ್ಷೇತ್ರದಲ್ಲಿ ಅವರೆಲ್ಲ ಸಾಕಷ್ಟು ದಿನದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಹೋಗಿ ಅವರಿಗೆ ಅಡೆ ತಡೆ ಮಾಡುವುದು ಸರಿಯಲ್ಲ. ಆದರೆ ಪಕ್ಷ ಅಂತಹ ತೀರ್ಮಾನ ಈಗಂತೂ ತೆಗೆದುಕೊಂಡಿಲ್ಲ. ಆ ರೀತಿ ಆದರೆ ಮುಂದೆ ನೋಡುವಾ ಎಂದು  ಕುಲಕರ್ಣಿ ತಿಳಿಸಿದ್ದಾರೆ.

Share News

About BigTv News

Check Also

ಸ್ನ್ಯಾಕ್ಸ್ ಪ್ಯಾಕೆಟ್‌ನಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಕಾಲೇಜು ಬಳಿ ಮಾರಾಟ: ಆರೋಪಿ ಬಂಧನ

ಬೆಳಗಾವಿ: ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಚಾಕ್ಲೆಟ್ ಬಚ್ಚಿಟ್ಟು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉದ್ಯಮಬಾಗ ಪೊಲೀಸರು …

Leave a Reply

Your email address will not be published. Required fields are marked *