Breaking News

ಗದಗ

ಯಶ್​ ಬರ್ತ್​ಡೇಗೆ ಬ್ಯಾನರ್​ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವು

ಗದಗ ಇಂದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಹುಟ್ಟುಹಬ್ಬದ ದಿನದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ಯುವಕರು ವಿದ್ಯುತ್ ಶಾಕ್ ತಗುಲಿ (Electric Shock) ಸಾವನ್ನಪ್ಪಿದ್ದಾರೆ. ಈ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ (Lakshmeshwara, Gadag) ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.ಹನಮಂತ ಹರಿಜನ್ (21) ಮುರಳಿ ನಡವಿನಮನಿ (20) ಮತ್ತು ನವೀನ್ ಗಾಜಿ(19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ …

Read More »

ದರ್ಶನ ಅಭಿನಯಿಸಿದ ಬಹುನೀಕ್ಷಿತ ಕಾಟೇರ ಚಲನಚಿತ್ರವು ಬಿಡುಗಡೆಯಾಗಿದ್ದು,ಮೊದಲ ದಿನವೇ ಅದ್ಧೂರಿ ಪ್ರದರ್ಶನ…

ರೋಣ: ರಾಜ್ಯಾದ್ಯಂತ ಚಾಲಿಂಗ್ ಸ್ಟಾರ್ ದರ್ಶನ ಅಭಿನಯಿಸಿದ ಬಹುನೀಕ್ಷಿತ ಕಾಟೇರ ಚಲನಚಿತ್ರವು ಬಿಡುಗಡೆಯಾಗಿದ್ದು,ಮೊದಲ ದಿನವೇ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ದರ್ಶನ ಅಭಿಮಾನಿಗಳು ಪಟಾಕಿ ಸಿಡಿಸಿ ಕಟೌಟ್ ಗಳಿಗೆ ಹೂವಿನ ಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಶ್ರೀ ರೇಣುಕಾ ಚಿತ್ರಮಂದಿರದಲ್ಲಿ ಕಾಟೇರ ಚಲನಚಿತ್ರ ಮೊದಲನೇ ದಿನವು ಬಿಡುಗಡೆಯಾಗಿದ್ದು,ಮೊದಲ ದಿನವೇ ಚಿತ್ರಮಂದಿರ ಮುಂಬಾಗದಲ್ಲಿ ಚಾಲಿಂಗ್ ಸ್ಟಾರ್ ದರ್ಶನ ಅವರ ಕಟೌಟ್ ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ದರ್ಶನ ಕಟೌಟ್ ಗೆ ಹೂವಿನ ಹಾರ ಹಾಕಿ …

Read More »

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾಗಿ ಸೋಮು ನಾಗರಾಜ ನೇಮಕ

ಗದಗ ರೋಣ:ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಮ್.ಗುರುಮೂರ್ತಿ ಶಿವಮೊಗ್ಗ,ರಾಜ್ಯ ಸಂ.ಸಂಚಾಲಕ ಎಸ್.ಫಕೀರಪ್ಪನವರು,ವಿಭಾಗಿಯ ಸಂಚಾಲಕ ಪ್ರಕಾಶ ಹೊಸಳ್ಳಿ ಅವರ ನಿರ್ದೇಶನದಂತೆ‌ ಜಿಲ್ಲಾ ಸಂಚಾಲಕ ಶರಣು ಪೂಜಾರ ಅವರು ರೋಣ ತಾಲೂಕು ಸಂಚಾಲಕರಾಗಿ ಸೋಮಶೇಖರ ನಾಗರಾಜ ಅವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಬಸ್ ಹಾಗೂ ಟಾಟಾ ಸುಮೋ ನಡುವೆ ಅಪಘಾತ ಸಂಭವಿಸಿ ಟಾಟಾ ಸುಮೋನಲ್ಲಿದ್ದ ಐವರು ಸಾವು..

ಗದಗ: ಬಸ್ ಹಾಗೂ ಟಾಟಾ ಸುಮೋ ನಡುವೆ ಅಪಘಾತ ಸಂಭವಿಸಿ ಟಾಟಾ ಸುಮೋನಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರೇಗಲ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಗಜೇಂದ್ರಗಡ ಕಡೆಯಿಂದ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಹೊರಟಿದ್ದ ಟಾಟಾ ಸೊಮೊ ಗದಗದಿಂದ ಗಜೇಂದ್ರಗಡ ಹೊರಟಿದ್ದ ಬಸ್ ನಡುವೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ನೆರೇಗಲ್ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ …

Read More »

ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ರಾಜ್ಯ ಹೆದ್ದಾರಿ ಬಂದ ಮಾಡಿ ರೈತರ ಆಕ್ರೋಶ

ಗದಗ: ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ರಾಜ್ಯ ಹೆದ್ದಾರಿ ಬಂದ ಮಾಡಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಹೆದ್ದಾರಿ ಬಂದ್ ಮಾಡಿದ ರೈತರು, ಬೇಕೆ ಬೇಕು ಕರೆಂಟ್ ಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತ ವಾಹನಗಳು ಇದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ …

Read More »

ಶೋಭಾ ಕರಂದ್ಲಾಜೆ ವಿರುದ್ಧ ಎಚ್.ಕೆ.ಪಾಟೀಲ್ ಗರಂ ಆಗಿದ್ಯಾಕೆ?

ಗದಗ: ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ಯಡವಟ್ಟು ಮಾಡಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ವ್ತಕ್ತಪಡಿಸಿದ್ದಾರೆ ಶೋಭಾ ಕರಂದ್ಲಾಜೆ ಮಹತ್ವದ ಸ್ಥಾನದಲ್ಲಿದ್ದಾರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳನ್ನ ಕೂಡಿಸಿ ಕೇಂದ್ರ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಇದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ ನಮ್ಮ ಕಾವೇರಿ ಸ್ಥಿತಿ ಬಗ್ಗೆ ಚರ್ಚೆ ಮಾಡಬೇಕು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. …

Read More »

ಭರ್ಜರಿಯಾದ ಗಣೇಶ ಮೂರ್ತಿಗಳ ಮಾರಾಟ…..

ಗದಗ: ಗಣೇಶ ಹಬ್ಬ ಅಂದ್ರೆ ಸಡಗರ ಸಂಭ್ರಮ ಇದ್ದೇ ಇರುತ್ತೆ.‌ ನಗರದಲ್ಲಿ ಹಬ್ಬಕ್ಕೆ ಮುಂಚಿನ ದಿನವೇ ಖರೀದಿ ಭರಾಟೆ ಬಲು ಜೋರಾಗಿದೆ. ಮಾರ್ಕೆಟ್​ನತ್ತ ಬರುತ್ತಿರೋ ಜನ ತಮಗೆ ಇಷ್ಟವಾದ ಮೂರ್ತಿಗಳನ್ನ ಬುಕ್ ಮಾಡಿದ್ದಾರೆ. ಪರಿಸರ ಸ್ನೇಹಿ ಗಣಪತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಅನ್ನೋ ನಿಟ್ಟಿನಲ್ಲಿ ಗದಗ ಜಿಲ್ಲೆ ತಯಾರಕರು ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡೋದಕ್ಕೆ ಮುಂದಾಗಿದ್ದು, ಪರಿಸರ ಸ್ನೇಹಿ ಗಣಪಗಳ ಮಾರಾಟವೂ ಭರ್ಜರಿಯಾಗಿ ನಡೀತಿದೆ. ಗದಗ ನಗರದ ಎಪಿಎಂಸಿ …

Read More »

ನಾಳೆ ವರಮಹಾಲಕ್ಷ್ಮಿ ಹಬ್ಬ: ಭರ್ಜರಿ ವ್ಯಾಪಾರ

ಗದಗ: ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗದಗ ನಗರದ ಮಾರುಕಟ್ಟೆಯಲ್ಲಿ ಜನರಿಂದ ತುಂಬಿ ತುಳುಕ್ಕುತ್ತಿದೆ. ಬಾಳೇಹಣ್ಣು, ಹೂವಿನ ದರ ಗಗನಕ್ಕೇರಿದೆ. ದುಬಾರಿಯಾದ್ರೂ ಪರವಾಗಿಲ್ಲ‌ ಹಬ್ಬ ಆಚರಣೆ ಮಾಡಲೇಬೇಕಲ್ಲ, ಅಂತಿರೋ ಜನರಿಂದ ಹೂ, ಹಣ್ಣು, ಬಾಳೆ ದಿಂಡು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನೂ ಕೆಲವರು ಅವಶ್ಯಕತೆಗೆ ತಕ್ಕಷ್ಟೇ ಖರೀದಿ ಮಾಡ್ತಿದ್ದಾರೆ. ಭರ್ಜರಿ ವ್ಯಾಪಾರ ಮಾಡ್ತಿರೋ ವ್ಯಾಪಾರಿಗಳು ಫುಲ್‌ ಖುಷಿಯಾಗಿದ್ದಾರೆ. ಆ ಮೂಲಕ ಸಂಭ್ರಮದ ವರಮಹಾಲಕ್ಷ್ಮಿ‌ ಹಬ್ಬ ಆಚರಣೆಗೆ ಸಿಧ್ಧರಾಗಿದ್ದಾರೆ.

Read More »

ಮುಳಗುಂದದಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ…

ಮುಳಗುಂದ : ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋಲಾಟ, ಯುವಕರ ಹೆಜ್ಜೆ ಮೇಳ ಮೆರವಣಿಗೆಯೊಂದಿಗೆ ಶನಿವಾರ ಆಚರಿಸಲಾಯಿತು.ಸಂಪ್ರದಾಯದಂತೆ ಪಟ್ಟಣದ ದಾವಲ್ ಮಲ್ಲಿಕ ಪಹಾಡ, ನದಾಫ್ ಗಲ್ಲಿ ಕೌಲಪೇಟಿ, ಮಕಾನದಾರ ಮಸೀದಿ, ಚಿಂದಿಪೇಟಿ, ಸವಳಭಾವಿ, ತಿಗಡಿಕೇರಿ, ಬಂಡಿ ಓಣಿ, ಸಂಗನಪೇಟಿನಲ್ಲಿ ಪ್ರತಿಷ್ಠಾಪಿಸಲಾದ (ಪಂಜಾ) ಅಲೈದೇವರು, ಡೋಲಿ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಹಾಂತ ಶಿವಯೋಗಿಶ್ವರ ಮಠದ ಹತ್ತಿರ ಪರಸ್ಪರ ಎದರುಗೊಂಡ (ಅಲೈಬಲೈ) …

Read More »

ವಿದ್ಯುತ್ ಶಾರ್ಟಸರ್ಕ್ಯೂಟ ಮನೆಗೆ ಬೆಂಕಿ…

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೇರಿಯಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟದಿಂದ ಮನೆಗೆ ಬೆಂಕಿ ಬಿದ್ದು ಟಿವಿ,ಮೊಬೈಲ್ ಸೇರಿದಂತೆ ಅನೇಕ ಮನೆಯ ಸಾಮಗ್ರಿಗಳು ಹಾನಿಗೊಳಗಾದ ಘಟನೆ ಜರುಗಿದೆ.ಬಸ್ತಿಕೇರಿಯ ನಿವಾಸಿಯಾದ ಪರಮೇಶ್ವರಪ್ಪ ಮಹಾರುದ್ರಪ್ಪ ಯರ್ಲಗಟ್ಟಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಕ್ಕಪಕ್ಕದ ಮನೆಯವರು ಬಂದು ಬೆಂಕಿ ನಿಂದಿಸಿದ್ದಾರೆ‌.ಯಾವುದೇ ಪ್ರಾಣಹಾನಿಯಾಗಿಲ್ಲ.

Read More »

You cannot copy content of this page