ಹಾಸನ : ಕುಟುಂಬ ರಾಜಕಾರಣಿದಲ್ಲಿ ಟಿಕೆಟ್ ಗಾಗಿ ಬುಗಿಲೆದ್ದಿರುವ ಮಾತಿನ ಚಕಮಕಿಯಲ್ಲಿ, ಈಗ ಮತ್ತೊಂದು ಹೊಸ ರೂಪ ಪಡೆದಿದೆ. ಹಾಸನದಲ್ಲಿ ಟಿಕೆಟ್ ಗಾಗಿ ಒಂದು ಭವಾನಿ ರೇವಣ್ಣ ಪೈಪೋಟಿ ನಡೆಸುತ್ತಿದ್ದರೇ , ಮತ್ತೊಂದು ಕಡೆ ಮಾಜಿ ಶಾಸಕರ ಮಗ ಸ್ವರೂಪ್ ತಮ್ಮ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೇ ಮತದಾರರು ಹಾಗೂ ಭವಾಣಿ ರೇವಣ್ಣನವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಇತ್ತ ಕುಮಾರಸ್ವಾಮಿಗೆ ಟಾಂಗ್ ಕೊಡುವ ಕೆಲಸ ಮಾಡಿದ್ದಾರೆ. ಕರ್ನಾಟಕದ ‘ಅಮ್ಮ’.. ಭವಾನಿ ರೇವಣ್ಣ ಟಿಕೆಟ್ ಗಲಾಟೆ ಬೆನ್ನಲ್ಲೇ ಲೇಟೆಸ್ಟ್ ಪೋಸ್ಟರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಭವಾನಿಯನ್ನ ಜಯಲಲಿತಾಗೆ ಹೋಲಿಸಿದ್ದಾರೆ. ರೇವಣ್ಣ ಬೆಂಬಲಿಗರು ಕರ್ನಾಟಕದ ಮಹಿಳಾ ಶಕ್ತಿಗೆ ಭರವಸೆ ಎಂದು ಪೋಸ್ಟ್ ಹಾಕಲಾಗಿದ್ದು, ಜಯಲಲಿತಾ ಸಮಕ್ಕೆ ಭವಾನಿ ರೇವಣ್ಣ ಫೋಟೋ ಪೋಸ್ಟ್ ಹಾಕಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

