Breaking News

ಮೋದಿ ಆಗಮನಕ್ಕಾಗಿ ಪೂರ್ವಸಿದ್ಧತೆ- ಅಂತಿಮವಾಗಿ ಪರಿಶೀಲಿಸಿದ ಸಚಿವ ಪ್ರಹ್ಲಾದ ಜೋಶಿ

ಧಾರವಾಡ : ನಾಳೆ ಧಾರವಾಡದ ಐಐಟಿ ನೂತನ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಮೋದಿ ಐಐಟಿಗೆ ಆಗಮಿಸಲಿದ್ದು, ಅದರ ಕೊನೆಯ ಹಂತದ ಸಿದ್ಧತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಸಚಿವರೊಂದಿಗೆ ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿದ್ದರು. ಕಾರ್ಯಕ್ರಮದ ಮುಖ್ಯವೇದಿಕೆ, ಸಿರಿಧಾನ್ಯಗಳ ಚಿತ್ರಣ, ಮೋದಿ ಆಗಮಿಸುವ ರಸ್ತೆ, ಹೆಲಿಪ್ಯಾಡ್ ಸೇರಿದಂತೆ ಇತ್ಯಾದಿ ಸಿದ್ಧತೆಗಳನ್ನು ಜೋಶಿ ಕೊನೆಯದಾಗಿ ಪರಿಶೀಲನೆ ನಡೆಸಿದರು.

Share News

About BigTv News

Check Also

ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರ! ತಪ್ಪು ನಿರ್ಧಾರ ಜಿಲ್ಲೆಯ ಕಾಂಗ್ರೆಸ್‌ಗೆ ಭಾರೀ ಹೊಡೆತ..?

ಫೋಟೋ ಪಾಲಿಟಿಕ್ಸ್‌ಗೆ ಮಣೆ ಬೇಡ, ಸಂಘಟನೆಯ ನಾಯಕರಿಗೆ ಮನ್ನಣೆ ಕೊಡಿ! ಡಿಸಿಸಿ ಆಯ್ಕೆ ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ… ಡಿಸಿಸಿ ಅಧ್ಯಕ್ಷ ಸ್ಥಾನ: …

Leave a Reply

Your email address will not be published. Required fields are marked *