ಹುಬ್ಬಳ್ಳಿ: ಪ್ರಸಿದ್ದ ಮೀನಿನ ವ್ಯಾಪಾರಸ್ಥ ಕುಟುಂಬ ಪರಸ್ಪರ ಹೊಡೆದಾಡಿಕೊಂಡ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಗಣೇಶ್ ಪೇಟೆಯ ಪ್ರಸಿದ್ದ ಮೀನಿನ ವ್ಯಾಪಾರಸ್ಥ ಯೂಸುಫ್ ಕೈರಾತಿ ಹಾಗೂ ಅವರ ಕುಟುಂಬದ ಮತ್ತೊಬ್ಬ ಸದಸ್ಯ ಅನೀಫ್ ಕೈರಾತಿ ಮದ್ಯ ಆಸ್ತಿ ವಿಚಾರಕ್ಕೆ ಪದೆ ಪದೆ ಜಗಳವಾಗುತ್ತಿತ್ತು, ಇವತ್ತು ಕೂಡ ಇದೆ ವಿಷಯವಾಗಿ ಇಬ್ಬರ ಮದ್ಯ ಜಗಳ ನಡೆದು ಜಗಳ ವಿಪೋಪಕ್ಕೆ ಹೋಗಿದೆ. ಹಲ್ಲೆಗೆ ಒಳಗಾದ ಯೂಸುಫ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿಸ್ತೆ ನೀಡಲಾಗುತ್ತಿದೆ.
ಹನೀಫ್ ಕೈರಾತಿ ಮೇಲೆ ಹಿಂದೆ ಕೂಡ ಪಾಲಿಕೆ ಆವರಣದಲ್ಲಿ ಪಾಲಿಕೆ ವಾಹನಗಳಿಗೆ ಕಲ್ಲು ಎಸೆಯುವ ಹಾಗೂ ಪಾಲಿಕೆ ಆಸ್ತಿ ಹಾನಿ ಮಾಡಿರುವ ಕುರಿತು ಹನೀಫ್ ಮೇಲೆ ಪಾಲಿಕೆ ಅವರಿಂದ ಪೊಲೀಸ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಅನಿಫ್ ತಂದೆ ಅಬ್ದುಲ್ ಹಮೀದ್ ಕೈರಾತಿ ಮೇಲೆ ಕೂಡ ಪಾಕಿಸ್ತಾನ್ ಪರ ಘೋಷಣೆ ಹಾಗೂ ದೇಶ ದ್ರೋಹ ಪ್ರಕರಣ ದಾಖಲಾಗಿದೆ.
ಮಾನಸಿಕ ಅಸ್ವಸ್ಥ ಅಂತ ಸರ್ಟಿಫಿಕೇಟ್ ತೊಗೊಂಡ ಹನೀಫ್, ಚಾಕು ತಲವಾರಗಳನ್ನು ಇಟ್ಟುಕೊಂಡು ಜನರ ಮೇಲೆ ಹಲ್ಲೆ ಮಾಡುತ್ತಾನೆ ಅಂತ ಕೂಡ ಕೇಳಿಬಂದಿದೆ. ಸದ್ಯ ಶಹರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.