ಪಾಕಿಸ್ತಾನ ಸೇರಿದಂತೆ ಸ್ವಾತಂತ್ರ್ಯ ದೊರೆಯುವ ಮುಂಚೆ ಎಲ್ಲವೂ ಅಖಂಡ ಭಾರತವೇ ಆಗಿತ್ತು. ಆದರೆ, ದುರದೃಷ್ಟವಶಾತ್ ನಮಗೆ ಸ್ವಾತಂತ್ರ್ಯ ಸಿಕ್ಕಿತೆಂಬ ಸಂತಸ ಒಂದು ಕಡೆಯಾದರೆ ನಮ್ಮ ಒಂದು ಅಂಗ ಕಿತ್ತಿ ಕಳಚಿ ಹೋದದ್ದು ಇನ್ನೊಂದೆಡೆ. ಹೀಗೆ ಬೆರೆಯಾದ ಭಾರತ ಮತ್ತು ಪಾಕಿಸ್ತಾನ ಶತ್ರುತ್ವ ಬೆಳೆಸಿಕೊಂಡಿದ್ದು ತಿಳಿದಿರುವ ಸಂಗತಿಯಾಗಿದೆ. ಶತ್ರುತ್ವದಿಂದ ಮೆರೆಯುತ್ತಿದ್ದ ಪಾಕಿಸ್ತಾನ ಇಂದು ಎಲ್ಲವನ್ನು ಕಳೆದುಕೊಂಡು, ಭಿಕ್ಷುಕರಿಗಿಂತಲೂ ಕೀಳು ಮಟ್ಟಕ್ಕೆ ಬಂದು ನಿಂತಿದೆ . ತಿನ್ನಲು ಆಹಾರ ಸಿಗದೇ, ಜೀವನ ನಡೆಸಲು ಉದ್ಯೋಗವಿಲ್ಲದೆ ಬಡತನದಿಂದಾ ಅಲ್ಲಿನ ಜನರು ಒಬ್ಬರಿಗೆ ಒಬ್ಬರು ಹೊಡೆದಾಡಿಕೊಂಡು ಸಾಯುವಂತ ಪರಿಸ್ಥಿತಿಗೆ ತಲುಪಿದೆ. ಈ ಪರಿಸ್ಥಿತಿ ಎದುರಿಸಲಾಗಾದೆ ಅಲ್ಲಿನ ಪ್ರಜೆಗಳು ಮಾಧ್ಯಮದರ್ಶನದಲ್ಲಿ ಭಾರತದ ಜೊತೆ ಪಾಕಿಸ್ತಾನ ಸೇರಿಸಿ ನಮಗೆ ಮೋದಿ ನಾಯಕತ್ವ ಬೇಕು ಎಂದು ಧ್ವನಿ ಎತ್ತಿದ್ದಾರೆ. ಇದಕ್ಕಾಗಿ ಅಲ್ಲಿನ ನಾಗರಿಕರು ಪಾಕಿಸ್ತಾನ ಸರ್ಕಾರದ ವಿರುದ್ಧ ರಸ್ತೆಗೆ ಇಳಿದು ಪ್ರತಿಭಟನೆ ಹೋರಾಟ ನಡೆಸಿದ್ದಾರೆ.
ಇನ್ನು ಪಾಕಿಸ್ತಾನದಲ್ಲಿ ಊಟ ಸಿಗದೆ ಜನರು ಪರದಾಡುತ್ತಿದ್ದರೆ ಪ್ರಧಾನಿ ಎಲ್ಲಾ ದೇಶದ ಮುಂದೆ ವಿಶ್ವಸಂಸ್ಥೆಯ ಎದುರಿಗೆ ಭಿಕ್ಷೆ ಬೇಡಿದರು ಒಂದು ರೂಪಾಯಿ ಕೂಡ ಸಾಲ ಸಿಗದೆ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಇದರಿಂದಾ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಭಾರತ ಎಂದರೆ ಶತ್ರುತ್ವ ಎಂದು ಬಡೆದಾಡುತ್ತಿದ್ದ ಹಾಗೂ ಭಾರತದ ವಿರುದ್ಧ ಗಡಿ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಖ್ಯಾತಿ ತೆಗೆಯುತ್ತಿದ್ದ ಪಾಕಿಸ್ತಾನ ಇಂದು ಭಾರತದ ಮುಂದೆ ಕೈ ಮಂದೆ ಮಾಡುತ್ತಿದೆ. ಆದರೆ ಭಾರತ ಯಾವುದೇ ಚರ್ಚೆ ಮಾಡದೆ, ಪಾಕಿಸ್ತಾನಕ್ಕೆ ಒಂದಿಟ್ಟು ಸೊಪ್ಪು ಹಾಕದೆ ವಿಶ್ವದಾದ್ಯಂತ ಎತ್ತರದ ಸ್ಥಾನಕ್ಕೆ ಬೆಳೆಯುತ್ತಿದೆ.