ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ಐದು ಜನರ ಗುಂಪೊಂದು ಓರ್ವನನ್ನು ಹತ್ಯೆಗೈದಿರುವ ಘಟನೆ ನಗರದ ವಿದ್ಯಾನಗರದಲ್ಲಿ ತಡರಾತ್ರಿ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿಯ ಹೆಸರು ಸುಶಾಂತ್ ದಾಂಡೇಲಿ (27) ಸೆಟಲ್ಮೆಂಟ್ ನಿವಾಸಿ ಎಂದು ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ವಿದ್ಯಾನಗರದಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಲುಲಕ ಕಾರಣಕ್ಕಾಗಿ ಕುಡಿದ ಮತ್ತಿನಲ್ಲಿಯೇ ಮಧ್ಯದ ಬಾಟಲಿಯಿಂದ ಹೊಡೆದು ಆತನ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತೈ ಮಾಡಲಾಗಿದೆ.
ಹತ್ಯೆ ಮಾಡಿದ ವ್ಯಕ್ತಿಯ ಹೆಸರು ರಾಹುಲ್ ಗೋಕಾಕ್ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗೋಕುಲ್ ರೋಡ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.