ನವದೆಹಲಿ : ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನ ಹಿನ್ನಲೆ ಇಂದು ದೆಹಲಿಯ ಇಂಡಿಯಾ ಗೇಟ್ ನಲ್ಲಿ ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣಗೊಳಿಸಲಿದ್ದಾರೆ.
ನೇತಾಜಿಗೆ ಅನ್ಯಾಯ ಮಾಡುವ ಒಂದು ವಿಭಾಗ ಕಾಂಗ್ರೆಸ್ ನಲ್ಲಿದೆ ಎಂದು ಅನಿತಾ ಬೋಸ್ ಹೇಳಿದ್ದಾರೆ. ಗಾಂಧೀಜಿ ನೆಹರೂ ಪರವಾಗಿ ನಿಂತರು. ನೇತಾಜಿ ಬಂಡಾಯ ಸ್ವಭಾವದವರಾಗಿದ್ದ ಕಾರಣ ಅವರಿಗೆ ನನ್ನ ತಂದೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ನೇತಾಜಿ ಸಹಚರರನ್ನು ಖಂಡಿಸಲಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ರಿ ಅನಿತಾ ಬೋಸ್ ಹೇಳಿದ್ದಾರೆ. ಬ್ರಿಟಿಷರ ಪರ ಹೋರಾಡಿದವರಿಗೆ ಸಿಗುವ ಸವಲತ್ತುಗಳು ಬಹುಕಾಲ ಅವರಿಗೆ ಸಿಗಲಿಲ್ಲ. ಭಾರತದ ಸ್ವಾತಂತ್ರ್ಯದ ನಿರ್ಣಯಕ್ಕೆ ಜರ್ಮನಿ, ಜಪಾನ್ ಮತ್ತು ಇಟಲಿ ಸಹಿ ಹಾಕಬೇಕೆಂದು ನೇತಾಜಿ ಮುಸೊಲಿನಿಯನ್ನು ಎರಡು ಬಾರಿ ಭೇಟಿ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

