ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ಮತ್ತೊಂದು ಆತಂಕ ಶುರುವಾಗಿದೆ. ಸ್ಯಾಂಡಲ್ವುಡ್ನ ಹಿರಿಯ ನಟ , ಕಲಾತಪಸ್ವಿ ರಾಜೇಶ್ ಅಸ್ವಸ್ಥಗೊಂಡಿದ್ದಾರೆ. 82 ವರ್ಷದ ರಾಜೇಶ್, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜೇಶ್ ಆಸ್ಪತ್ರೆ ಸೇರಿರುವ ವಿಚಾರ ತಿಳಿದು ಕನ್ನಡ ಚಿತ್ರರಂಗ ಕಂಗೆಟ್ಟಿದೆ. ಹಿರಿ-ಕಿರಿಯ ನಟರು, ನಟಿಯರು, ಕಲಾವಿದರು, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಕಂಗಾಲಾಗಿದ್ದಾರೆ. ಅಭಿಮಾನಿಗಳು ಕಲಾತಪಸ್ವಿ ಆರೋಗ್ಯವಾಗಿ ವಾಪಸ್ ಬರಲಿ, ಇನ್ನಷ್ಟು ಕಾಲ ನಮ್ಮ ಜೊತೆಗೆ ಇರಲಿ ಅಂತ ಹಾರೈಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

