Breaking News

ರೈತರು ಬೆಳೆದ ಧಾನ್ಯಗಳನ್ನು ಕಳ್ಳತನ ಮಾಡಿದ ಕಳ್ಳರ ಬಂಧನ

ಧಾರವಾಡ : ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ದವಸ, ಧಾನ್ಯ ಕಳ್ಳತನ ಮಾಡಿದ್ದ ಮೂವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಲಗುಂದದ ಕಿರಣ್ ಕುಂಬಾರ, ಅಣ್ಣಿಗೇರಿಯ ಕೃಷ್ಣಾ ಗಾಣದಾಳ ಹಾಗೂ ವಿಜಯ ಉಣಕಲ್ ಎಂಬುವವರೇ ಬಂಧಿತ ಆರೋಪಿಗಳು.

ನವಲಗುಂದದ ರಾಮಲಿಂಗೇಶ್ವರ ಓಣಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಚೀಲ ಧಾನ್ಯಗಳನ್ನು ಈ ಮೂವರೂ ಸೇರಿ ಕಳ್ಳತನ ಮಾಡಿದ್ದರು. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ನವಲಗುಂದ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದರು. ಇದೀಗ ಮೂವರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ದವಸ, ಧಾನ್ಯಗಳನ್ನು ಜಪ್ತಿ ಮಾಡಿದ್ದಾರೆ

Share News

About BigTv News

Check Also

ದಿಂಗಾಲೇಶ್ವರ ಶ್ರೀಗಳ ಮನವೊಲಿಸುವಲ್ಲಿ ಯಶಸ್ವಿಯಾದ ರಜತ ಉಳ್ಳಾಗಡ್ಡಿಮಠ…?

ಹುಬ್ಬಳ್ಳಿ ಟ್ರಬಲ್ ಶೂಟರ್ ರಜತ್ ಎಂದರೆ ದೊಡ್ಡವರು ಹುಬ್ಬಳ್ಳಿ : ಅಂತಿಮ ಹಂತದಲ್ಲಿ ತಮಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರು,ಪಕ್ಷಕ್ಕಾಗಿ …

Leave a Reply

Your email address will not be published. Required fields are marked *

You cannot copy content of this page