ಧಾರವಾಡ : ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ದವಸ, ಧಾನ್ಯ ಕಳ್ಳತನ ಮಾಡಿದ್ದ ಮೂವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಲಗುಂದದ ಕಿರಣ್ ಕುಂಬಾರ, ಅಣ್ಣಿಗೇರಿಯ ಕೃಷ್ಣಾ ಗಾಣದಾಳ ಹಾಗೂ ವಿಜಯ ಉಣಕಲ್ ಎಂಬುವವರೇ ಬಂಧಿತ ಆರೋಪಿಗಳು.
ನವಲಗುಂದದ ರಾಮಲಿಂಗೇಶ್ವರ ಓಣಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಚೀಲ ಧಾನ್ಯಗಳನ್ನು ಈ ಮೂವರೂ ಸೇರಿ ಕಳ್ಳತನ ಮಾಡಿದ್ದರು. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ನವಲಗುಂದ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದರು. ಇದೀಗ ಮೂವರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ದವಸ, ಧಾನ್ಯಗಳನ್ನು ಜಪ್ತಿ ಮಾಡಿದ್ದಾರೆ