ಅಳವಂಡಿ: ತಾವು ಪಡೆದ ಶಿಕ್ಷಣ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಕೊಪ್ಪಳ ತಾಲ್ಲೂಕಿನ ನಾಲ್ವರು ಯುವಕರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಮನೆಪಾಠ ಮಾಡುತ್ತಿದ್ದಾರೆ.
ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದ ಪದವೀಧರರಾದ ಆಂದೇಶ ಉಳ್ಳಾಗಡ್ಡಿ, ವಿನಾಯಕ ಮರೇಬಾಳ, ಶಂಕರಗೌಡ ಪೊಲೀಸ್ ಪಾಟೀಲ, ದವನಕುಮಾರ ಆನಂದಹಳ್ಳಿ ಎಂಬುವವರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಎರಡರಿಂದ ಮೂರು ಗಂಟೆಗಳ ಕಾಲ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
ಗ್ರಾಮದ ಯುವಕರಾದ ಆಂದೇಶ ಉಳ್ಳಾಗಡ್ಡಿ, ಶಂಕರಗೌಡ ಅವರು ಬಿಎಸ್ಸಿ, ಬಿ.ಇಡಿ ಪದವೀಧರರಾಗಿದ್ದರೆ, ವಿನಾಯಕ ಬಿ.ಕಾಂ, ದವನಕುಮಾರ ಬಿಎಸ್ಸಿ ಪೂರ್ಣಗೊಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೊರೊನಾ ಹಾವಳಿಯಿಂದ ಶಾಲೆಗಳು ಬಂದಾಗಿದ್ದವು. ಹಾಗಾಗಿ ಸರ್ಕಾರ ಆನ್ಲೈನ್ ಶಿಕ್ಷಣ ನೀಡಲು ಮುಂದಾಗಿತ್ತು. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಶಾಲೆಯಿಂದ ದೂರವಾದ ಮಕ್ಕಳು ಓದು ಬರಹ ಮರೆಯುತ್ತಿರುವುದನ್ನು ಗಮನಿಸಿದ ಈ ಯುವಕರು ಗ್ರಾಮದ ಮಕ್ಕಳಿಗೆ ನಿರಂತರವಾಗಿ ಮನೆ ಪಾಠದ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

