ಅಮರಾವತಿ: ಆಂಧ್ರದ ಕೋನಸೀಮ ಜಿಲ್ಲೆಯಲ್ಲಿ ಗೋದಾವರಿ ನದಿಯಿಂದ ಅನಿಲ ಸೋರಿಕೆಯಾಗುತ್ತಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಕಾಟ್ರೇನಿಕೋಣ ಮಂಡಲದ ಯಾಣಂ ದರ್ಯಾಲತಿಪ್ಪ ಮತ್ತು ಬಳುಸುತಿಪ್ಪ ನಡುವೆ ನದಿಯಲ್ಲಿ ಒಎನ್ಜಿಸಿ ಗ್ಯಾಸ್ ಪೈಪ್ಲೈನ್ ಹಾಕಿದೆ.
ಆದರೆ ಸೆ.20 ರಂದು ರಾತ್ರಿಯಿಂದಲೇ ಗ್ಯಾಸ್ ಸೋರಿಕೆಯಾಗುತ್ತಿದ್ದು, ಇದುವರೆಗೂ ಅಧಿಕಾರಿಗಳು ಪತ್ತೆ ಮಾಡದ ಕಾರಣ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ನೀರಿನ ಮೇಲೆ ಬುಗ್ಗೆಯಂತೆ ಚಿಮ್ಮುತ್ತಿರುವ ಗ್ಯಾಸ್ ನದಿ ತಳಭಾಗದಲ್ಲಿ ಹಾಕಿರುವ ಪೀಪ್ ಒಡೆದಿರುವುದರಿಂದ ಬರುತ್ತಿದೆ. ಇದೀಗ ಗ್ಯಾಸ್ ಹೊತ್ತಿ ಉರಿಯುವ ಭೀತಿ ಎದುರಾಗಿದೆ.
ಇನ್ನು ಗ್ಯಾಸ್ ಸೋರಿಕೆಯಿಂದ ವಾಸನೆ ಬರುತ್ತಿದ್ದು, ಇದುವರೆಗೂ ನಿರ್ವಹಣಾ ಸಂಸ್ಥೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಎನ್ಜಿಸಿ ತಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

