Breaking News

ಬಟ್ಟೆ ಒಗೆಯುವ ವೇಳೆ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಮಹಿಳೆ

ಚಿಂಚೋಳಿ: ಮಹಿಳೆಯೊಬ್ಬರು ‌ಬಟ್ಟೆ ಒಗೆಯುವಾಗ‌ ‌ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಘಟನೆ ತಾಲೂಕಿನ ಕರ್ಚಖೇಡ ಗ್ರಾಮದಲ್ಲಿ ನಡೆದಿದೆ.
ಕರ್ಚಖೇಡ ಗ್ರಾಮದ ಬುಜ್ಜಮ ಜರಣಪ್ಪ ಯಂಪಳ್ಳಿ(35) ಮುಲ್ಲಾಮಾರಿ‌ ನದಿ ನೀರಿನ ರಭಸಕ್ಕೆ ‌ಕೊಚ್ಚಿ ಹೋದ ಮಹಿಳೆ.
ಅ.1ರ ಮಂಗಳವಾರ ರಾತ್ರಿ ತಾಲೂಕಿನಲ್ಲಿ ಬಿರುಸಿನ ಮಳೆಯಿಂದಾಗಿ ನದಿಯಲ್ಲಿ ನೀರು ರಭಸದಿಂದ ಹರಿಯುತ್ತಿರುವ ಕಾರಣ ಮಹಿಳೆಯ ಶವ ಇನ್ನೂ ಪತ್ತೆಯಾಗಿಲ್ಲ.
ಚಿಂಚೋಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಸುಲೇಪೇಟ‌ ಪೊಲೀಸ್ ಠಾಣೆಯ ಪೊಲೀಸರು ಕರ್ಚಖೇಡ ಗ್ರಾಮಕ್ಕೆ ಭೇಟಿ ‌ನೀಡಿದ್ದಾರೆ. ಬಿರುಸಿನ ಮಳೆಯಿಂದಾಗಿ ಮುಲ್ಲಾಮಾರಿ‌ ನದಿ ನೀರು ತುಂಬಿ ಹರಿಯುತ್ತಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *