ಧಾರವಾಡ: ರಂಗಾಯಣದ ಪಂ.ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದೊಂದಿಗೆ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ 02 ನೇ ದಿನದ ನಾಟಕೋತ್ಸವದಲ್ಲಿ ಭವಭೂತಿ ರಚನೆ, ವಿದ್ಯಾ ಹೆಗಡೆ ಭಾರ್ಗವ ಕೆ.ಎನ್ ಮತ್ತು ಎಂ.ಎಚ್ ಗಣೇಶ ಸಂಗೀತ ವಿನ್ಯಾಸ, ಅಕ್ಷರ ಕೆ.ವಿ ಕನ್ನಡ ರೂಪ ನಿರ್ದೇಶನ ಮಾಡಿರುವ ಮಾಲತಿ ಮಾಧವ ನಾಟಕವನ್ನು ನೀನಾಸಂ ತಂಡದವರು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕ ಡಾ.ರಾಜು ತಾಳಿಕೋಟಿ, ಆಡಳಿತಾಧಿಕಾರಿ ಶಶಿಕಲಾ ವೀ ಹುಡೇದ, ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್ನ ಕಾರ್ಯದರ್ಶಿ ಹನುಮೇಶ ಸಕ್ಕರಿ, ಧಾರವಾಡ ಗೊಂಬೆ ಮನೆ ಹಾಗೂ ಆಟ ಮಾಟ ತಂಡದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

