ಮಂಡ್ಯದ ಪೇಟೆ ಬೀದಿಯಲ್ಲಿ ಸತೀಶ್ ಬಾಬು ಎಂಬುವವರ ಆಕ್ಟಿವಾ ಹೋಂಡಾ ಕಳ್ಳತನವಾಗಿತ್ತು.ಸ್ಕೂಟರ್ ನಲ್ಲಿ ಕೀ ಬಿಟ್ಟು ಪೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕಳ್ಳ ಮಂಜುನಾಥ್ ಕದ್ದೊಯ್ದಿದ್ದ. ಇದಾದ ಬಳಿಕ ಬಟ್ಟೆ ಬದಲಾಯಿಸಿಕೊಂಡು ಬೆಂಗಳೂರಿನತ್ತ ಎಸ್ಕೇಪ್ ಆಗುತ್ತಿದ್ದ.ಈ ವೇಳೆ ಬೆಂ- ಮೈ ಎಕ್ಸ್ಪ್ರೆಸ್ ಹೈವೆ ಮದ್ದೂರಿನ ಗೆಜ್ಜಲಗೆರೆ ಬಳಿ ತಡೆ ಗೋಡೆಗೆ ಗುದ್ದಿ ಅಪಘಾತ ಮಾಡಿಕೊಂಡಿದ್ದಾನೆ. ಅಪಘಾತವಾದ ಬಳಿಕ ಮಂಜುನಾಥ್ ಆಸ್ಪತ್ರೆ ದಾಖಲಾಗಿದ್ದ. ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

