ಆನೇಕಲ್: ತಾಲೂಕಿನ ಚಂದಾಪುರದಲ್ಲಿ ಊರಿಗೆ ಹೋದ ಕುಟುಂಬದ ಮನೆ ಹಾಗೂ ಕ್ಲಿನಿಕ್ನ ಬೀಗ ಒಡೆದು ಕಳ್ಳರು ₹10 ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.ಎಎನ್ಆರ್ ಕಲ್ಯಾಣ ಮಂಟಪದ ಬಳಿಯ ಧನುಷ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ₹50,000 ನಗದು ಮತ್ತು 80 ಗ್ರಾಂ ಚಿನ್ನ, ಒಂದು ಡೈಮಂಡ್ ಉಂಗುರ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.ಹುಟ್ಟೂರಿಗೆ ಹೋಗಿದ್ದ ಧನುಷ್ ಮರಳಿ ಸೋಮವಾರ ಮನೆಗೆ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಎಎನ್ಆರ್ ಕಲ್ಯಾಣ ಮಂಟಪದ ಸಮೀಪದಲ್ಲಿಯೇ ಇದ್ದ ಸಂಗಮೇಶ್ವರ ಕ್ಲಿನಿಕ್ ಬೀಗ ಹೊಡೆದ ಕಳ್ಳರು ಕ್ಯಾಶ್ ಕೌಂಟರ್ನಲ್ಲಿದ್ದ ₹3 ಲಕ್ಷ ನಗದು ಕಳವು ಮಾಡಿದ್ದಾರೆ.ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

