ಹುಬ್ಬಳ್ಳಿ: ಎಸ್.ಎಂ.ಕೃಷ್ಣ ನಗರದ ಸ್ಮಶಾನಗಟ್ಟಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದೂ ಅಲ್ಲದೆ, ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಸಬಾಪೇಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾನ್ಸ್ಟೆಬಲ್ ಎಸ್.ಎಸ್.ಮೇಟಿ ಅವರು ಚಾಕು ಇರಿತದಿಂದ ಗಾಯಗೊಂಡಿದ್ದು ಕೆಎಂಸಿ-ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್.ಆರ್. ರಾಮಾಪುರ, ರಮಣ ಜೆ ಮತ್ತು ಪಿ.ಕೆ.ಚಲವಾದಿ ಮೇಲೆ ಹಲ್ಲೆ ನಡೆದಿದೆ. ಈಶ್ವರ ನಗರದ ನಿವಾಸಿಗಳಾದ ಅಯಾನ್ ರಫೀಕ್, ಸಮೀರ್, ತೌಫಿಕ್ ಮತ್ತು ವಿನಾಯಕ ಬಂಧಿತ ಆರೋಪಿಗಳು. ಪೊಲೀಸರು ರಾತ್ರಿ ಗಸ್ತಿನಲ್ಲಿ ಇದ್ದಾಗ ಸ್ಮಶಾನದಲ್ಲಿ ಕೆಲವು ಯುವಕರು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರು. ಅವರನ್ನು ವಿಚಾರಿಸಲು ತೆರಳಿದಾಗ ನಾಲ್ವರು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

