ಹುಬ್ಬಳ್ಳಿ: ಜನರ ಆಶೋತ್ತರಗಳಿಗೆ ಹಾಗೂ ಹೇಳಿಕೆಗೆ ಬದ್ಧವಾಗಿದ್ದು ಹೀಗಾಗಿ ಅಭ್ಯರ್ಥಿ ಗೆಲ್ಲುವುದಕ್ಕಿಂತ ಜನರ ಆಶೋತ್ತರಗಳು ಅಂದರೆ ಅಭ್ಯರ್ಥಿಯ ವಿಚಾರ ಗೆಲ್ಲಬೇಕೆಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದರು.ನಗರದ ಪತ್ರಕರ್ತರಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡಿಸುವುದು, ಕೆಲಸ ಮಾಡದೇ ಇದ್ದವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದು, ತಿರಸ್ಕರಿಸುವ ವ್ಯವಸ್ಥೆ ಬರಬೇಕು. ಸಂಬಳಕ್ಕೆ ಕೆಲಸ ಮಾಡುವ ಅಭ್ಯರ್ಥಿಗಳನ್ನು ಆರಿಸಿ ತರಬೇಕು, ಜನರ ಹತ್ತಿರ ಹೋಗಿ ಸಮಸ್ಯೆ ಕೇಳುವವರನ್ನು ಗೆಲ್ಲಿಸಿ ಎಂದರು.ಧಾರವಾಡ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಂತೋಷ ನಂದೂರ ಪರ ಪ್ರಚಾರಕ್ಕೆ ಆಗಮಿಸಿದ್ದ ಉಪೇಂದ್ರ ಅವರು, ಪ್ರಭಾವಿಗಳ ಹಾಗೂ ಬಂಡವಾಳಶಾಹಿಗಳ ಕೈಯಲ್ಲಿ ರಾಜಕೀಯ ನಲುಗುತ್ತಿದೆ. ಹಣ ಹಾಕಿ ಹಣ ತೆಗೆಯುವ ಕ್ಷೇತ್ರವಾಗಿದೆ , ಅದು ಬದಲಾಗಬೇಕು. ಪ್ರಜಾಪ್ರಭುತ್ವದ ಹಬ್ಬ ಒಂದೇ ದಿನವನ್ನಾಗಿ ನೋಡಲಾಗುತ್ತಿದೆ. ಆ ದಿನವೂ ಮತದಾರ ವೋಟ್ ಮಾರಾಟವಾಗದೇ ಪ್ರಜೆಗಳು ತಮ್ಮ ಪ್ರಭುತ್ವ ಕಳೆದುಕೊಳ್ಳುತ್ತಿದ್ದಾರೆ ಎಂದರು.ಪಕ್ಷಕ್ಕಿಂತ ಅಭ್ಯರ್ಥಿ ನೋಡಿ ಮತ ನೀಡಿ. ಈಗಾಗಲೇ ಪ್ರಜಾಕೀಯ ಪಕ್ಷವು ಜನರ ಸಮಸ್ಯೆಗಳ ಹಾಗೂ ಬೇಡಿಕೆಗಳನ್ನು ಬರೆಯಿಕೊಳ್ಳುವ ಕರಪತ್ರ ಮುದ್ರಿಸಿ ಹಂಚಿ ಅವರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದೆ. ಪಾರದರ್ಶಕ ವ್ಯವಸ್ಥೆಗೆ ಮತ ನೀಡಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂತೋಷ ನಂದೂರ ಇದ್ದರು.
Check Also
ಚುನಾವಣೆ ಅಧಿಕಾರಿಗಳ ಹಾಗೂ ಪೊಲೀಸರ ವಿರುದ್ಧ ಮಠಾಧೀಶರ ಹೋರಾಟ: ಕ್ಷಮೆಯಾಚನೆ ಮಾಡಿದ ಖಾಕಿ…
ಹುಬ್ಬಳ್ಳಿ: ಅವರೆಲ್ಲರೂ ನಾಡಿನ ವಿವಿಧ ಮಠಗಳ ಮಠಾಧೀಶರು. ಮತದಾನದ ಜಾಗೃತಿ ಕುರಿತು ಸಭೆ ನಡೆಸುವ ಸಂದರ್ಭದಲ್ಲಿ ನಡೆದ ಅದೊಂದು ಗಲಾಟೆ …