ಹೊಸಪೇಟೆ/ಕೊಪ್ಪಳ: ಅಖಂಡ ಭಾರತವನ್ನು ವಿಭಜಿಸಿದ್ದ ಕಾಂಗ್ರೆಸ್ನಿಂದ ಈಗ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದರಲ್ಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸುಸ್ತಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ನೀತಿಯಿಂದಾಗಿ ದೇಶದ ಪೂರ್ವದಿಂದ ದಕ್ಷಿಣದವರೆಗಿನ 11 ರಾಜ್ಯಗಳಲ್ಲಿ ನಕ್ಸಲೈಟ್ಗಳು ಹುಟ್ಟಿಕೊಂಡರು. ಖಲಿಸ್ತಾನ್ ಪರಿಕಲ್ಪನೆ ಜನಿಸಿದ್ದು ಕಾಂಗ್ರೆಸ್ ನೀತಿಯಿಂದಾಗಿ ಎಂದು ಆರೋಪಿಸಿದರು. ಕೊಪ್ಪಳದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ಗೆ 50 ವರ್ಷ ದಲಿತರ ಕೂಗುಕೇಳಲಿಲ್ಲ. ಮೀಸಲು ಹೆಚ್ಚಳಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅನುಮೋದಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು. ನಾನು ಕನಕನ ನೆಲದಿಂದ ಬಂದವನು. ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ನೀಡಿದ್ದು, ಮಹರ್ಷಿ ವಾಲ್ಮೀಕಿ, ಕನಕದಾಸ ಸರ್ಕಾರಿ ಜಯಂತಿ ಘೊಷಿಸಿದ್ದು ಯಡಿಯೂರಪ್ಪ. ಕಾಂಗ್ರೆಸ್ನವರು ವಕ್ಪ್ ಆಸ್ತಿ ನುಂಗುವ ಮೂಲಕ ಅಲ್ಪಸಂಖ್ಯಾತರಿಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

