ವಿಜಯಪುರ : ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ತಾಳಿಕೋಟಿ ತಾಲೂಕಿನ ಕೊಡಗಾನೂರ ಗ್ರಾಮದ ಮೌನೇಶ ಬಸವರಾಜ ಬಡಿಗೇರ (20) ಜನವರಿ 30 ರಂದು ಕೊಡಗಾನೂರ ಮನೆಯಿಂದ ನಾಪತ್ತೆಯಾಗಿದ್ದ ಫೆ.2 ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಕಾಲುವೆಯಲ್ಲಿ ಶವ ಪತ್ತೆಯಾಗಿತ್ತು.
ಎರಡು ವರ್ಷಗಳಿಂದ ತಾಳಿಕೋಟೆ ಪಟ್ಟಣದ ಯುವತಿಯನ್ನು ಮಗ ಮೌನೇಶ ಪ್ರೀತಿಸುತ್ತಿದ್ದ ಎಂದು ಒಟ್ಟು 9 ಜನರ ವಿರುದ್ಧ ಮುದ್ದೇಬಿಹಾಳ ಠಾಣೆಯಲ್ಲಿ ಮೌನೇಶ ತಾಯಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.