ಚಿತ್ರದುರ್ಗ: ಪತಿ, ಪತ್ನಿಯರ ನಡುವೆ ಹೊಂದಾಣಿಕೆ ಜೀವನ ಸಾಧ್ಯವೇ ಇಲ್ಲ ಅನ್ನುವಂತ ಸಂದರ್ಭಗಳಲ್ಲಿ ಇಬ್ಬರೂ ದೂರಾಗಿ ಅವರವರ ಪಾಡಿಗೆ ಬದುಕು ಸಾಗಿಸೋದನ್ನೂ ಕಂಡಿದ್ದೇವೆ.
ಆದರೇ ಗಂಡನೇ ಸರ್ವಸ್ವ ಅಂತ ತಿಳಿದು ಬಂದ ಪತ್ನಿಯನ್ನ ಸಂಭಾಳಿಸಲಾಗದ ಪತಿ ಮಾನವೀಯತೆ ಮರೆತು ಕ್ರೌರ್ಯ ಮರೆದು ಹತ್ಯೆ ಮಾಡಿದ್ದಾನೆ. ಎರಡನೇ ಮದುವೆ ಪ್ರಶ್ನಿಸಿ, ಸಂಶಯಿಸಿ ಪತಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯ ಹತ್ಯೆ ಮಾಡಿದ ಆರೋಪಿ ಪತಿ ಪೊಲೀಸ್ ಠಾಣೆಗೆ ತೆರಳಿ, ಕೊಲೆ ಮಾಡಿದ್ದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.