ಮಂಗಳೂರು: ಕೊರೊನಾ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದರೂ ಮೇ 15ರ ಬಳಿಕ ಶಾಲಾ ತರಗತಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
3ನೇ ಅಲೆಯ ಸಂದರ್ಭದಲ್ಲಿ ಆತಂಕ ಇದ್ದರೂ ಶಾಲೆಗಳನ್ನು ತೆರೆದು ತರಗತಿ ನಡೆಸಿದ್ದೇವೆ. ಶಿಕ್ಷಣದ ಗುಣಮಟ್ಟ ಹಾಗೂ ಕಲಿಕಾ ಚೇತರಿಕೆ ಆಗ ಬೇಕಾಗಿರುವುದರಿಂದ ಈಗ ತರಗತಿಗಳನ್ನು ಬೇಗನೆ ಆರಂಭಿಸುವುದು ಅಗತ್ಯ ಎಂದವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

