ಶ್ರೀನಗರ: ಜಮ್ಮು ನಗರದ ಸುಂಜ್ವಾನ್ ಸೇವಾ ನೆಲೆ ಮೇಲೆ ಸೋಮವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬಾರ್ತ್ವಾಲ್ ಅವರ ಪ್ರಕಾರ, ಬೆಳಿಗ್ಗೆ 10 ರಿಂದ 10:30 ರ ನಡುವೆ ದೂರದಿಂದ ಗುಂಡು ಹಾರಿಸಲಾಗಿದೆ.ದಾಳಿಯಲ್ಲಿ ಓರ್ವ ಸೈನಿಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಪ್ರದೇಶದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾದ ಸುಂಜ್ವಾನ್ ಸೇನಾ ನೆಲೆಯನ್ನ ಚಲನೆಯನ್ನ ನಿರ್ಬಂಧಿಸಲು ಮುಚ್ಚಲಾಯಿತು ಮತ್ತು ಶೋಧ ಕಾರ್ಯಾಚರಣೆಯನ್ನ ಬೆಂಬಲಿಸಲು ವಿಶೇಷ ಕಾರ್ಯಾಚರಣೆ ಗುಂಪನ್ನ ನಿಯೋಜಿಸಲಾಯಿತು ಎಂದು ತಿಳಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

