Breaking News

ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನಿಂದ ಸುರ್ಜೇವಾಲಾ ಪುತ್ರನಿಗೆ ಟಿಕೆಟ್

ಹರಿಯಾಣ: ವಿಧಾನಸಭಾ ಚುನಾವಣೆಗೆ 45 ಅಭ್ಯರ್ಥಿಗಳ ಮೂರನೇ ಮತ್ತು ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈ ಮೂಲಕ ಒಟ್ಟು 86 ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೈತಾಲ್‌ನಿಂದ ಸಂಸದ ರಣದೀಪ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರನ್ನು ಕಣಕ್ಕಿಳಿಸಿದೆ.
ನಾಲ್ಕನೇ ಪಟ್ಟಿಯಲ್ಲಿ ಅಂಬಾಲಾ ಕಂಟೋನ್ಮೆಂಟಿನಿಂದ ಪರಿಮಳ್ ಪರಿ, ಪಾಣಿಪತ್ ಗ್ರಾಮಾಂತರದಿಂದ ಸಚಿನ್ ಕುಂದು, ನರ್ವಾನಾದಿಂದ ಸತ್ಬೀರ್ ದುಬ್ಲೇನ್ (ಎಸ್‌ಸಿ), ರಾನಿಯಾದಿಂದ ಸರ್ವಮಿತ್ರ ಕಾಂಬೋಜ್ ಮತ್ತು ಟಿಗಾಂವ್‌ನಿಂದ ರೋಹಿತ್ ನಗರ್ ಅವರನ್ನು ಕಣಕ್ಕಿಳಿಸಿದೆ.
ಮೂರನೇ ಪಟ್ಟಿಯಲ್ಲಿ ಪಂಚಕುಲದಿಂದ ಮಾಜಿ ಉಪ ಮುಖ್ಯಮಂತ್ರಿ ಚಂದರ್ ಮೋಹನ್, ಅಂಬಾಲಾ(ನಗರ)ದಿಂದ ಮಾಜಿ ಸಚಿವ ನಿರ್ಮಲ್ ಸಿಂಗ್, ಜಗದ್ರಿಯಿಂದ ಅಕ್ರಮ್ ಖಾನ್, ಫತೇಹಾಬಾದ್‌ನಿಂದ ಬಲ್ವಾನ್ ಸಿಂಗ್ ದೌಲತ್‌ಪುರಿ, ಹಿಸಾರ್‌ನಿಂದ ರಾಮ್ ನಿವಾಸ್ ರಾರಾ, ಬವಾನಿ ಖೇರಾ (ಎಸ್‌ಸಿ) ದಿಂದ ಪ್ರದೀಪ್ ನರ್ವಾಲ್ ಮತ್ತು ಹಾಥಿನ್‌ನಿಂದ ಇಸ್ರೇಲ್ ಮೊಹಮ್ಮದ್ ಸ್ಪರ್ಧಿಸಲಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *