Breaking News

ಗುಡ್ಡ ತೆರವುಗೊಳಿಸಿ ಕಚೇರಿ ಸ್ಥಾಪನೆಗೆ ಮನವಿ

ಕಮಲಾಪುರ: ಪಟ್ಟಣದ ಮಧ್ಯ ಭಾಗದಲ್ಲಿರುವ ಗುಡ್ಡ ತೆರವುಗೊಳಿಸಿದರೆ ಸುಮಾರು 10 ಎಕರೆ ಸರ್ಕಾರಿ ಜಮೀನು ದೊರೆಯಲಿದ್ದು ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸುಮಾರು 100 ಅಡಿ ಎತ್ತರವಿರುವ ಈ ಗುಡ್ಡ ಪಟ್ಟಣದ ಹೃದಯಭಾಗದಲ್ಲಿದೆ, ಸರ್ಕಾರಿ ಗಾಂವಠಾಣಾ ಆಗಿದ್ದು, ಗುಡ್ಡದ ತಳಭಾಗದ ಇಕ್ಕೆಲದಲ್ಲೆ ನೂರಾರು ಮನೆಗಳಿವೆ ಸಾವಿರಾರು ಜನ ವಾಸವಾಗಿದ್ದಾರೆ ಈ ಗುಡ್ಡ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದ್ದು, ಗುಡ್ಡ ಕುಸಿದರೆ ನೂರಾರು ಜನರ ಜೀವ ಹಾನಿಯಾಗುವ ಸಂಭವವಿದೆ. ಈಗಾಗಲೆ ಅಲ್ಲಲ್ಲಿ ಸ್ವಲ್ಪ ಭೂ ಕುಸಿತ ಕಂಡು ಬಂದಿದೆ ಮಳೆ ಹೆಚ್ಚಾದರೆ ಭೂ ಕುಸಿತ ಉಂಟಾಗಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಗಳಾಗುವ ಸಂಭವವಿದೆ ಎಂಬುದು ಇಲ್ಲಿಯ ನಿವಾಸಿಗಳ ಆತಂಕವಾಗಿದೆ. ಗುಡ್ಡದ ಬದಿಯಲ್ಲಿರುವ ಬಂಡೆಗಳು ಉರುಳುವ ಸಾಧ್ಯತೆ ಇದೆ. ಇದರಿಂದಲೂ ಅನಾಹುತ ಕಾದಿದೆ ಎನ್ನುತ್ತಾರೆ ಸಾರ್ವಜನಿಕರು.
ಕಮಲಾಪುರ ತಾಲ್ಲೂಕು ಕೇಂದ್ರವಾಗಿದೆ ಮಿನಿ ವಿಧಾನಸೌಧ ಸೇರಿದಂತೆ ಇತರೆ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಜಾಗದ ಕೊರತೆ ತೀವ್ರವಾಗಿ ಕಾಡುತ್ತಿದೆ. ಪಟ್ಟಣದಿಂದ ಎರಡ್ಮೂರು ಕಿ.ಮೀ ದೂರದಲ್ಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಪಟ್ಟಣದ ಮಧ್ಯಭಾಗದಲ್ಲಿರುವ ಈ ಗುಡ್ಡದ ಮಣ್ಣು ಬೆರೆಡೆ ಸ್ಥಳಾಂತರಿಸಬೇಕು ಎರಡೂ ಬದಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಬೇಕು ಸುಮಾರು 10 ಎಕರೆ ಸರ್ಕಾರಿ ಜಮೀನು ದೊರೆಯಲಿದ್ದು ಕಚೇರಿ ಸ್ಥಾಪನೆಗೆ ಅನುಕೂಲವಾಗುತ್ತದೆ. ವಿವಿಧೆಡೆ ಬಡಾವಣೆಗಳು ಆಗಿರುವದರಿಂದ ಈಗಾಗಲೇ ಕಮಲಾಪುರ ಮೂಲ ಪಟ್ಟಣದಲ್ಲಿನ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ, ಗುಡ್ಡದ ಹಿಂಬದಿಯ ಪ್ರದೇಶದಲ್ಲಿ ಜನಸಂದಣಿ ಕಡಿಮೆಯಾಗಿದೆ ಕೆಲವೇ ದಿನಗಳಲ್ಲಿ ಮುಖ್ಯ ಪಟ್ಟಣ ಹಾಳು ಹಂಪೆಯಂತಾಗುವ ಸಾಧ್ಯತೆ ಇದೆ. ಮೂಲ ಪಟ್ಟಣದ ಅಸ್ತಿತ್ವ ಉಳಿಸುವುದರ ಜೊತೆಗೆ ಲಭ್ಯ ಇರುವ ಸರ್ಕಾರಿ ಜಮೀನಿನ ಸದುಪಯೋಗಕ್ಕೆ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಗುಡ್ಡ ತೆರವುಗೊಳಿಸಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ಅನುದಾನ ಒದಗಿಸಲು ಮನವಿ ಸಲ್ಲಿಸಬೇಕು’ ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಜನ ಸಂದಣಿ ಹೆಚ್ಚಾಗಿ ಕಮಲಾಪುರ ಮೂಲ ಪಟ್ಟಣಕ್ಕೆ ಕಳೆ ಬರುತ್ತದೆ  ತಹಶೀಲ್ದಾರ್‌ ಮೋಸಿನ್‌ ಅಹಮ್ಮದ ಗುಡ್ಡ ತೆರವುಗೊಳಿಸಲು ತಜ್ಞರಿಂದ ತಾಂತ್ರಿಕ ಒಪ್ಪಿಗೆ ಪಡೆಯಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದು ಶಾಂತಪ್ಪ ಹಾದಿಮನಿ ಪ.ಪಂ. ಮುಖ್ಯಾಧಿಕಾರಿ ಗುಡ್ಡ ಗ್ರಾಮ ಠಾಣಾ ಆಗಿದ್ದು ಪಟ್ಟಣ ಪಂಚಾಯಿತಿಗೆ ಒದಗಿಸುವಂತೆ ತಹಶೀಲ್ದಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣ ಪಂಚಾಯಿತಿ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಗುಡ್ಡ ತೆರವುಗೊಳಿಸುವ ‍ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದಿದ್ದಾರೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *