ನವಲಗುಂದ: ಮನೆ ಇಲ್ಲದ ಬಡಜನತೆಗೆ ಸೂರು ಒದಗಿಸುವುದಕ್ಕಾಗಿ ಈಗಾಗಲೇ ನವಲಗುಂದ ನಗರದ ಅಣ್ಣಿಗೇರಿ ರಸ್ತೆಯಲ್ಲಿನ ಆಶ್ರಯ ಕಾಲೋನಿ ನಿರ್ಮಾಣ ಮಾಡಿದ್ದು, ಇನ್ನೂ ಹೆಚ್ಚನ ಜನರಿಗೆ ಸೂರು ಒದಗಿಸುವ ದೃಷ್ಟಿಯಿಂದ ಹೆಚ್ಚಿನ ಜಮೀನಿನ ಅವಶ್ಯಕತೆ ಇದ್ದದ್ದನ್ನು ಮನಗೊಂಡು ಸರ್ಕಾರಕ್ಕೆ ಈಗಾಗಲೇ ಇರುವ ಆಶ್ರಯ ಜಮೀನಿನ ಪಕ್ಕದಲ್ಲಿರುವ 12 ಎಕರೆ 34 ಗುಂಟೆ ಜಮೀನನ್ನು ಖರೀದಿ ಮಾಡಲಾಯಿತು.
ಇನ್ನೂ ಜಮೀನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಜಮೀನು ಖರೀದಿಸಲು ಅನುದಾನ ಬಿಡುಗಡೆಯಾಗಿದ್ದು, ಇಂದು ತಹಶೀಲ್ದಾರ ಕಾರ್ಯಾಲಯದಲ್ಲಿ ಜಿನಗಾ ಪರಿವಾರದವರ ಜಮೀನು ಖರೀದಿ ನೋಂದಣಿ ಮಾಡಿಕೊಳ್ಳಾಯಿತು.ಇದೇ ವೇಳೆ ಜಮೀನು ನೀಡಿದವರಿಗೆ ಶಾಸಕ ಎನ್.ಹೆಚ್.ಕೋನರಡ್ಡಿ ಸನ್ಮಾನಿಸಿ ಗೌರವಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

