Breaking News

ಸಾಲ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆ

ನವಲಗುಂದ : ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಲವಾಡ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕಾಲವಾಡ ಗ್ರಾಮದ ರೈತ ಗರ್ಜಪ್ಪ ನರಸಪ್ಪ ಸಾಲಮನಿ(51) ಈತನು ಕೃಷಿ ಚಟುವಟಿಕೆಗಾಗಿ ಆರೇಕುರಹಟ್ಟಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನಲ್ಲಿ 50 ಸಾವಿರ, ಕಾಲವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 45 ಸಾವಿರ ಮತ್ತು ಹೈನುಗಾರಿಕೆಗಾಗಿ ಹುಬ್ಬಳ್ಳಿಯ ಐಡಿಎಫ್‌ಸಿ ಬ್ಯಾಂಕಿನಲ್ಲಿ 4 ಲಕ್ಷ ಸಾಲ ಮಾಡಿದ್ದನು. ಇದರ ಪೈಕಿ ಕಂತುಗಳನ್ನು ಕಟ್ಟಿ 2,80,000/- ಸಾಲವನ್ನು ತುಂಬುವ ಬಗ್ಗೆ ಮಾನಸಿಕ ಮಾಡಿಕೊಂಡು ತನ್ನ ಧನದ ಹೊಟ್ಟಿನ ಶೆಡ್ಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *