ನವಲಗುಂದ : ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಲವಾಡ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಾಲವಾಡ ಗ್ರಾಮದ ರೈತ ಗರ್ಜಪ್ಪ ನರಸಪ್ಪ ಸಾಲಮನಿ(51) ಈತನು ಕೃಷಿ ಚಟುವಟಿಕೆಗಾಗಿ ಆರೇಕುರಹಟ್ಟಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನಲ್ಲಿ 50 ಸಾವಿರ, ಕಾಲವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 45 ಸಾವಿರ ಮತ್ತು ಹೈನುಗಾರಿಕೆಗಾಗಿ ಹುಬ್ಬಳ್ಳಿಯ ಐಡಿಎಫ್ಸಿ ಬ್ಯಾಂಕಿನಲ್ಲಿ 4 ಲಕ್ಷ ಸಾಲ ಮಾಡಿದ್ದನು. ಇದರ ಪೈಕಿ ಕಂತುಗಳನ್ನು ಕಟ್ಟಿ 2,80,000/- ಸಾಲವನ್ನು ತುಂಬುವ ಬಗ್ಗೆ ಮಾನಸಿಕ ಮಾಡಿಕೊಂಡು ತನ್ನ ಧನದ ಹೊಟ್ಟಿನ ಶೆಡ್ಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

