ಕೊಪ್ಪಳ: ಹೋರಾಟ ನಿರತ ಲಿಂಗಾಯತ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಸಮಾಜದ ಕ್ಷಮೆ ಕೇಳಬೇಕು ಹಲ್ಲೆ ಮಾಡಿದ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು. ಸಮಾಜದವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡಬೇಕು ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಇಂದು (ಡಿ.20) ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿಗಳು ಗಮನ ಹರಿಸಲಿಲ್ಲ. ತಾತ್ಕಾಲಿಕ ಧರಣಿ ಸತ್ಯಾಗ್ರಹ ನಿಲ್ಲಿಸಿದ್ದೇವೆ. ಡಿ. 23 ರಿಂದ ಮನೆ ಮನೆಗೆ ಭೇಟಿ ನೀಡುವ ಹೋರಾಟ ಆರಂಭವಾಗಲಿದೆ. ಹಲ್ಲೆಗೊಳಗಾದವರ ಕುಟುಂಬಕ್ಕೆ ಹೋಗಿ ಧೈರ್ಯ ತುಂಬುತ್ತೇವೆ. ಲಿಂಗಾಯತರ ಮೇಲೆ ರಾಜ್ಯದಲ್ಲಿ ಮೊದಲ ಬಾರಿಗೆ ಹಲ್ಲೆಯಾಗಿದೆ. ಹಲ್ಲೆ ಮಾಡಿದ ಕುಖ್ಯಾತಿಗೆ ಈ ಸರ್ಕಾರ ಪಾತ್ರವಾಗಿದೆ ಎಂದು ಕಿಡಿಕಾರಿದರು.
ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮಗೆ ಯಾರು ನ್ಯಾಯ ನೀಡುತ್ತಾರೊ ಅವರಿಗೆ ಸಹಕಾರ ನೀಡುವೆವು. ನಮ್ಮ ಸಮಾಜದ ಶಾಸಕರು, ಸಚಿವರಿಗೆ ಹೆದರಿಸಿದ್ದಾರೆ. ಅವರಿಗೆ ಏನಾದರೂ ಆಮಿಷವೊಡ್ಡಿರಬಹುದು. ಆದರೆ ನಮ್ಮ ಪರ ಇಬ್ಬರು ಶಾಸಕರು ಗಟ್ಟಿಯಾಗಿ ನಿಂತು ಮಾತನಾಡಿದ್ದಾರೆ. ಕೆಲ ಶಾಸಕರಿಗೆ ಆಸೆ ಆಮಿಷ ತೋರಿಸಿ ಮಾತನಾಡದಂತೆ ತಡೆದಿದ್ದಾರೆ. ಮೊನ್ನೆಯಿಂದ ನಮ್ಮ ಹೋರಾಟ ಕ್ರಾಂತಿಕಾರಿ ಹೋರಾಟವಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

