ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಚನ್ನಕೃಷ್ಣಪ್ಪ ಅವರು ಕೆಲಸದ ನಿಮಿತ್ತ ಸ್ನೇಹಿತರ ಜೊತೆ ಬಾಗೇಪಲ್ಲಿಗೆ ಹೋಗಿದ್ದರು.ರಾಷ್ಟ್ರೀಯ ಹೆದ್ದಾರಿ 44ರ ವರ್ಲಕೊಂಡ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕ ಅಧ್ಯಕ್ಷ ಬಿ. ಚನ್ನಕೃಷ್ಣಪ್ಪ ಮೃತಪಟ್ಟಿದ್ದಾರೆ. ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಸಮತಾ ಸೈನಿಕ ದಳವನ್ನು ಕರ್ನಾಟಕದಲ್ಲಿ ಕಟ್ಟಲು ಅವರು ಶ್ರಮಿಸಿದ್ದಲ್ಲದೇ, ಎಲ್ಲ ಜಿಲ್ಲೆಗಳಲ್ಲೂ ಅದರ ಘಟಕವನ್ನು ರಚನೆ ಮಾಡಲು ಪ್ರೇರಣೆಯಾಗಿದ್ದರು. ಅಂಬೇಡ್ಕರ್ ಸ್ಪೂರ್ತಿ ಸೌಧ ನಿರ್ಮಾಣಕ್ಕಾಗಿ ಹತ್ತು ವರ್ಷಗಳು ಹೋರಾಟ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಅಧಿಕಾರಿಗಳು ಸ್ಪೂರ್ತಿ ಸೌಧದಲ್ಲಿ ಸಿಗಬೇಕೆಂಬುದು ಚನ್ನಕೃಷ್ಣಪ್ಪ ಅವರ ಉದ್ದೇಶ ಆಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

