ಕೇರಳ ಕರಾವಳಿಯಲ್ಲಿ ಮುಳುಗಿದ ಲೈಬೀರಿಯನ್ ಸರಕು ಹಡಗಿನ ಕಂಟೈನರ್ಗಳು ಸೋಮವಾರ ದಡಕ್ಕೆ ಬರಲು ಪ್ರಾರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.ಸರಕು ಹಡಗು ಮಗುಚಿ ಬಿದ್ದು, ಗಮನಾರ್ಹ ತೈಲ ಸೋರಿಕೆಗೆ ಉಂಟಾಗಿದೆ. ಇಂಧನ ಸೋರಿಕೆಯಿಂದಾಗಿ ರಾಜ್ಯಾದ್ಯಂತ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಇಂಧನ ಗಂಟೆಗೆ ಸುಮಾರು ಮೂರು ಕಿಲೋಮೀಟರ್ ವೇಗದಲ್ಲಿ ತೇಲುತ್ತಿದೆ ಮತ್ತು ಶೀಘ್ರದಲ್ಲೇ ಪರಿಸರ ಸೂಕ್ಷ್ಮ ಕೇರಳ ಕರಾವಳಿಯ ಮೇಲೆ ಪರಿಣಾಮ ಬೀರುವ ಭೀತಿಯಿದೆ.ಹಡಗಿನ 640 ಕಂಟೇನರ್ಗಳಿದ್ದು, ಅವುಗಳಲ್ಲಿ 13 ಅಪಾಯಕಾರಿ ಸರಕುಗಳಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಮತ್ತು ಕಂಟೇನರ್ಗಳಿಂದ ದೂರವಿರಲು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

