ನಾಯಕನಹಟ್ಟಿ: ಹೋಬಳಿಯ ಅಬ್ಬೇನಹಳ್ಳಿ ಗ್ರಾಮದ ಗೌಡರ ಹಾಲಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ಕತ್ತರಿಸಿದ್ದಾರೆ.ಗೌಡರ ಹಾಲಪ್ಪ ಅವರ ಜಮೀನು ಅಬ್ಬೇನಹಳ್ಳಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಹೆದ್ದಾರಿಗೆ ಹೊಂದಿಕೊಂಡು ಮನೆಯಿದ್ದು, ಮನೆಯ ಹಿಂದೆಯೇ ಜಮೀನು ಇದೆ.15 ವರ್ಷದ ಶ್ರೀಗಂಧದ ಮರದ ಬುಡ ಕತ್ತರಿಸಿ ಸುಮಾರು 5 ಅಡಿಗಳಷ್ಟು ಶ್ರೀಗಂಧದ ತಿರುಳು (ಹಾಟ್ ವುಡ್) ಕಾಂಡವನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆ. ಈ ಬಗ್ಗೆ ಗೌಡರಹಾಲಪ್ಪ ಅವರ ಮಗ ಸುಪುತ್ರ ಬಾಬು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

