ಕೊಪ್ಪಳ: ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಗುರುವಾರ ರಾತ್ರಿ ಅಪಾರ ಪ್ರಮಾಣದಲ್ಲಿ ಪಡಿತರ ಅಕ್ಕಿ ಪತ್ತೆಯಾಗಿದ್ದು ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಹೊಲದಲ್ಲಿ ನಿರ್ಮಾಣ ಮಾಡಲಾಗಿರುವ ಗೋದಾಮಿನಲ್ಲಿ ರಾಶಿ ರಾಶಿ ಅಕ್ಕಿ ಮೂಟೆಗಳು ಇವೆ. ಆಹಾರ ಇಲಾಖೆ ಹಾಗೂ ಮುನಿರಾಬಾದ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ಕಿಗಳನ್ನು ಜಪ್ತಿ ಮಾಡಿದ್ದು ನಿಖರವಾಗಿ ಎಷ್ಟು ಅಕ್ಕಿ ಇವೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅಕ್ಕಿ ಅಂದಾಜು 150ರಿಂದ 200 ಟನ್ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಮನೂರಪ್ಪ ಹಾಗೂ ಗಾಳೆಪ್ಪ ಎನ್ನುವವರ ಮೇಲೆ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

