ಹುಬ್ಬಳ್ಳಿ: ಮನೆ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಎಪಿಎಂಸಿ ನವನಗರ ಪೋಲೀಸರು ಯಶಸ್ವಿಯಾಗಿದ್ದಾರೆ.ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಧನ್ಯಕುಮಾರ ಅರಸನಾಳ (30), ನಾರಾಯಣ ಬಾಚಣಕಿ(23) ಬಂಧಿತ ಆರೋಪಿಗಳು.ಮಹಾನಗರ ಪೋಲಿಸ್ ಹು-ಧಾ ಆಯುಕ್ತರಾದ ಎಂಎಸ್. ನಾಗರಾಜ ಅವರ ನೇತೃತ್ವದ ಪೋಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರಿಂದ 26,350 ರೂ. ಮೌಲ್ಯದ ವಿವಿಧ ಬೆಳ್ಳಿ ಆಭರಣಗಳು ಹಾಗೂ ಒಂದು ಎಲ್.ಇ.ಡಿ. ಕಂಪನಿಯ ಟಿ.ವಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆಯಲ್ಲಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ,ಪೋಲೀಸ ಸಿಬ್ಬಂದಿಗಳಾದ ದಿಲೀಪ್ ನಿಂಬಾಳಕರ, ಎಂ.ಎಚ್. ಶಿವರಾಜ, ಪ್ರಕಾಶ ಸೋಗಿ, ನಾಗರಾಜ ಗುಡಿಮನಿ, ಬಿ.ಎಫ್. ಬೆಳಗಾವಿ, ಎನ್.ಎಂ. ನೀಲಗಾರ, ಎಂ.ಸಿ. ಹೊನ್ನಪ್ಪನವರ, ಆರ್. ಎಸ್. ಹೊಂಕನದವರ, ಎಸ್.ಎಂ. ಕುರಹಟ್ಟಿ, ಎ.ಎಚ್. ಹುಗ್ಗಿ, ಕೆ.ಕೆ. ಕಾರಬಾರಿ, ವಿ.ಬಿ. ಪಾಟೀಲ ಅವರಿಗೆ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.
Check Also
ಪ್ರಧಾನಿ ನರೇಂದ್ರ ಮೋದಿಗೆ ಎಲ್ಲಿ ನಿಮ್ಮ ಉದ್ಯೊಗ ಎಂದ ರಣದೀಪ್ ಸಿಂಗ್ ಸುರ್ಜೆವಾಲ….
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಯುವಜನತೆಗೆ ನೀಡಿದ್ದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಲ್ಲಿ? ಎಂದು ಕರ್ನಾಟಕ …