ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಕಡೇ ಶಿವಾಲಯ ಅಜಿಲ ಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು, ಪರಿಣಾಮ ಅಜಿಲಮೊಗರು ಮಸೀದಿಯ ಆವರಣದವರೆಗೆ ನುಗ್ಗಿದ ನೆರೆ ನೀರು ನುಗ್ಗಿದೆ. ಅಲ್ಲದೇ ಕಡೇಶಿವಾಲಯ ದೇವಸ್ಥಾನದ ಸನಿಹವೂ ನದಿ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿವೆ.ಅಲ್ಲದೇ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಗಾಳಿ ರಭಸಕ್ಕೆ ತೆಂಗಿನ ಮರ ಮನೆ ಮೇಲೆ ಮುರಿದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.ಕೆದಿಲ ಗ್ರಾಮದ ಚಂದ್ರಪ್ಪ ಎನ್ನುವವರ ಮನೆ ಮೇಲೆ ಮರ ಬಿದ್ದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





