Breaking News

ವಿಜಿಗೆ ತೀರದ ಸಂಕಷ್ಟ, ಡಿಸಿಪಿ ಅಣ್ಣಾಮಲೈಯಿಂದ ವಿಚಾರಣೆ..!

ಬೆಂಗಳೂರು: ಪತ್ನಿಯರ ಗಲಾಟೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​​​ಗೆ ಇನ್ನೂ ಸಂಕಷ್ಟ ತೀರಿಲ್ಲ. ದುನಿಯಾ ವಿಜಯ್​ ಪತ್ನಿ ನಾಗರತ್ನ ಹಾಗೂ ಕೀರ್ತಿ ಗೌಡ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ವಿಜಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ ದುನಿಯಾ ವಿಜಯ್​ ಹಾಗೂ ನಾಗರತ್ನ ವಿರುದ್ಧ ಸಿಆರ್​ಪಿಸಿ ಸೆಕ್ಷನ್ 107 ಹಾಕಲಾಗಿದೆ. ಸೆಕ್ಷನ್ ಹಾಕಿ ವಾರ ಕಳೆದರೂ ದುನಿಯಾ ವಿಜಯ್ ಬಂದು ಮುಚ್ಚಳಿಕೆ ಬರೆದು ಕೊಡದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್​ ನೀಡಿದ್ದಾರೆ.ದುನಿಯಾ ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ವಿಜಯ್ ಹಾಗೂ ನಾಗರತ್ನ ಎರಡೂ ಕಡೆಯವರ ಮೇಲೆ ಸೆಕ್ಷನ್ 107 ಹಾಕಲಾಗಿದೆ. ಈ ಬಗ್ಗೆ ಸ್ಥಳೀಯ ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಂದು ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ಮುಂದೆ ನಟ ದುನಿಯಾ ವಿಜಯ್ ಹಾಗೂ ಕುಟುಂಬಸ್ಥರು ಹಾಜರಾಗಬೇಕಿದೆ.

Share News

About Shaikh BIG TV NEWS, Hubballi

Check Also

ಸೆಂಟ್ರಲ್ ಕ್ಷೇತ್ರದ ಹಿಡಿತಕ್ಕೆ ಹಾತೊರೆಯುತ್ತಿರುವ ಅಬ್ಬಯ್ಯ:ರಜತ್ ವಿರುದ್ಧ ಷಡ್ಯಂತ್ರ..?

ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದ ಹಿಡಿತಕ್ಕೆ ಹಾತೊರೆಯುತ್ತಿರುವ ಅಬ್ಬಯ್ಯ: ರಜತ್ ವಿರುದ್ಧ ಷಡ್ಯಂತ್ರ..? ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪಾರ್ಟಿಯಲ್ಲಿ …

Leave a Reply

Your email address will not be published. Required fields are marked *

You cannot copy content of this page