ಕೇಂದ್ರ ಸರ್ಕಾರ ಹಾಗೂ ಆರ್ಬಿಐ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲಾ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಆರ್ಬಿಐ ಅಧಿಕಾರಿಗಳ ಮಾತು ಪುಷ್ಠಿಕರಿಸುವಂತಿದೆ. ಈಗಾಗಲೇ ಆರ್ಬಿಐ 3.6 ಲಕ್ಷ ಕೋಟಿ ಹಣವನ್ನ ಸೆಂಟ್ರಲ್ ಬ್ಯಾಂಕ್ಗಳಿಗೆ ನೀಡಿದ್ದು, ಇದು ಸೆಂಟ್ರಲ್ ಬ್ಯಾಂಕ್ ಸರ್ಕಾರಕ್ಕೆ ಮೀಸಲಿಟ್ಟ 9.59 ಲಕ್ಷ ಕೋಟಿ ಮೊತ್ತದ ಮೂರನೇ ಒಂದು ಭಾಗಕ್ಕಿಂದ ಅಧಿಕ ಮೊತ್ತವಾಗಿದೆ, ಆದರೆ ಬ್ಯಾಂಕ್ ಮಂಡಳಿ ಇದುವರೆಗೂ ಆರ್ಬಿಐ ನೀಡಿರುವ ಮೊತ್ತವನ್ನು ಕ್ರೂಢೀಕರಿಸುವಲ್ಲಿ ವಿಫಲವಾಗಿದೆ. ಅಂದರೆ ಸೆಂಟ್ರಲ್ ಬ್ಯಾಂಕ್ ಸಾಲದ ರೂಪದಲ್ಲಿ ನೀಡಿರುವ ಹಣ ಇನ್ನೂ ಬ್ಯಾಂಕಿನ ಕೈ ಸೇರಿಲ್ಲ ಅಂತ ಆರ್ಬಿಐ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರ ತನ್ನ ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಆರ್ಬಿಐನಿಂದ ಹೆಚ್ಚಿನ ಮೊತ್ತ ನೀಡುವಂತೆ ನಿರೀಕ್ಷಿಸಿದೆ ಆದ್ರೆ , ಇದರಿಂದಾಗಿ ಮುಂಬರುವ ಅಪಾಯ ಎದುರಿಸಲು ಆರ್ಬಿಐ ತಯಾರಿಲ್ಲಾ ಅಂತ ಆರ್ಬಿಐನ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ನಡುವಿನ ಮುಸುಕಿನ ಗುದ್ದಾಟದಲ್ಲಿ ಸಾರ್ವಜನಿಕರು ತೊಂದ್ರೆ ಅನುಭವಿಸದಿದ್ರೆ ಅಷ್ಟೇ ಸಾಕು.
bigtvnews | Hubli Dharwad News | Kannada News | Karnataka News Hubli News | News In Hubli | Local news





