ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾ ಧಾರವಾಡ ಜಿಲ್ಲೆ ಮುಖ್ಯ ಘಟಕ ಕೈಗಾರಿಕಾ ಘಟಕ ಮಹಿಳಾ ಘಟಕ ಯುವ ಘಟಕ ಆಶ್ರಯದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ಧೂಮಪಾನ ಮಧ್ಯಪಾನ ದುಶ್ಚಟಗಳಿಂದ ಯುವಕರು ದೂರವಿದ್ದು ಸದೃಢ ಸಮಾಜ ನಿರ್ಮಾಣ ಮಾಡಲು ಜಾಗೃತಿಗಾಗಿ ಯಾತ್ರೆ ಹೊರಟ ಪೊಲೀಸ್ ಅಧಿಕಾರಿಗಳಾದ ಮುರುಗೇಶ್ ಚನ್ನನ್ನವರ್, ಪ್ರಶಾಂತ್ ಹಿಪ್ಪರಗಿ, ಸದಾನಂದ ಅಮರಾಪುರ ,ಹುಬ್ಬಳ್ಳಿಗೆ ಆಗಮಿಸಿದಾಗ ಚಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಸ್ವಾಗತಿಸಿ ,ಸನ್ಮಾನಿಸಿ, ಗೌರವಿಸಲಾಯಿತು.

ಸಮಾಜದ ಮುಖಂಡರಾದ ಸದಾನಂದ.ವಿ.ಡಂಗನವರ, ಡಾ: ಎಂಎಂ ನುಚ್ಚಿ, ಶಶಿಶೇಖರ್ ಡಂಗನವರ, ಡಾ: ಬಸವ ಕುಮಾರ್ ತಲವಾಯಿ, ಸೋಮನಗೌಡ ಪಾಟೀಲ್, ವೀರೇಶ್ ದಾಡಿಬಾವಿ, ಬಸವರಾಜ ಸಗರದ, ಶೇಖರಯ್ಯ ಮಠಪತಿ, ಕುಮಾರ್ ಪಾಟೀಲ, ಜೀ ವೈ ಹುಲ್ಲೂರು ,ಎಂಎಂ ಮನಗೂಳಿ, ಮಹಾಸಭಾದ ಮುಖಂಡರು ಗುರುಹಿರಿಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

