ಬೆಂಗಳೂರಿನಲ್ಲಿ ಜಾರ್ಖಂಡ್ ನೋಂದಾಯಿತ ವಾಹನದಲ್ಲಿ ಹೊರಟಿದ್ದ ಸ್ನೇಹಿತರ ಕಾರನ್ನು ಅಡ್ಡಗಟ್ಟಿದ ದ್ವಿಚಕ್ರ ವಾಹನ ಸವಾರ ಬೆದರಿಕೆ ಹಾಕಿದ್ದು, ಈ ದೃಶ್ಯಗಳನ್ನು ಕಾರಿನಲ್ಲಿದ್ದವರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಭಾರತದಲ್ಲಿ ಬೆಂಗಳೂರಿಗರನ್ನು ಗೂಂಡಾಗಳಂತೆ ಬಿಂಬಿಸುತ್ತಿದ್ದಾರೆ.
ಹೀಗೆ ಬಿಂಬಿಸಲು ಇದೊಂದೆ ಘಟನೆ ಕಾರಣವಲ್ಲ, ಈ ಹಿಂದೆ ಇಸ್ರೋ ವಿಜ್ಞಾನಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಕೂಡ ಕಾರಣವಾಗಿದೆ. ಬೆಂಗಳೂರಿನಲ್ಲಿ ಕಾರುಗಳಲ್ಲಿ ಸಂಚರಿಸುವ ಜನರನ್ನು ಸ್ಥಳೀಯರು ಬೇಕೆಂತಲೇ ತಡೆದು ಸೌರ್ಜನ್ಯವೆಸಗುತ್ತಾರೆ ಎಂದು ವರದಿಗಳಾಗುತ್ತಿವೆ. ಇದೀಗ ನಡೆದಿರುವ ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದ್ರೆ ವಿಡಿಯೋದಲ್ಲಿ ಕಾಣುವ ಸ್ಕೂಟರ್ ಸವಾರನ ನಡವಳಿಕೆ ಗೂಂಡಾ ವರ್ತೆಯನ್ನು ತೋರಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





