ಬೆಂಗಳೂರು: ಕನ್ನಡ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಮನ್ವಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಡರಾತ್ರಿಯ ಸಂಭವಿಸಿದ ಈ ದುರ್ಘಟನೆಯಿಂದಾಗಿ ಆ ನೋವಿನಿಂದ ಇನ್ನೂ ಹೊರ ಬಂದಿಲ್ಲ ಎಂದು ಮಗುವಿನ ದೊಡ್ಡಪ್ಪ ರುದ್ರಮಣಿ ಹೇಳಿದ್ದಾರೆ.
ಮೊದಲೇ ಒಂದು ಮಗು ಕಳೆದುಕೊಂಡಿದ್ವಿ, ನೋವು ಹೇಳೊದಿಕ್ಕೆ ಆಗುತ್ತಿಲ್ಲ, ಇನ್ನೂ ತಾಯಿ ಅಮೃತಾಳ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಮಗುವಿನ ಮೃತ ದೇಹವನ್ನು ಕನಕಪುರ ರಸ್ತೆಯ ಲಿಬರ್ಟಿ ಸ್ಕ್ವೇರ್ ಗೆ ರವಾನೆ ಮಾಡಲಾಗಿದೆ. ಅಲ್ಲದೇ ಇಂದು ಮದ್ಯಾಹ್ನ 2 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

