ಹುಬ್ಬಳ್ಳಿ : ಶಿಗ್ಗಾಂವಿ ಶೂಟೌಟ್ಗೆ ಪ್ರಕರಣಕ್ಕೆ ಮತ್ತೇ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯುವಕನ ಮಾವ ಮಹದೇವಪ್ಪ ತಳವಾರ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರಮಂದಿರಕ್ಕೆ ಎಂಟ್ರಿಯಾಗಿ ಬಳಿಕ ಅಪರಿಚಿತ ವ್ಯಕ್ತಿ ಗನ್ ತೋರಿಸಿದ್ದ. ಗನ್ ತೋರಿಸುತ್ತಲೇ ಹಂತಕ ತಬ್ಬಿಕೊಂಡು ಶೂಟ್ ಮಾಡಿದ್ದಾರೆ. ಕೆಜಿಎಫ್ – 2 ಸಿನೆಮಾ ಪ್ರಾರಂಭವಾಗಿ ಐದೇ ನಿಮಿಷದಲ್ಲಿಯೇ ಕಾಲು ತಾಗಿದ್ದಕ್ಕೆ ಜಗಳ ಆರಂಭವಾಗಿದ್ದು, ಜಗಳದ ನಂತ್ರ ವಾಪಸ್ಸು ಬಂದು ನೋಡ್ತೆನಿ ಎಂದು ತೆರಳಿದ್ದರು. ಹತ್ತೆ ನಿಮಿಷಗಳಲ್ಲಿ ವಾಪಸ್ ಬಂದು ಕಿರಾತಕ ಶೂಟ್ ಮಾಡಿದ್ದಾರೆ. ಶೂಟ್ ಮಾಡಿದವನ ಹೆಡೆಮೂರಿ ಕಟ್ಟಲು ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಅವರು ಶೂಟ್ ಮಾಡಿ ನಾಪತ್ತೆಯಾದವನಿಗಾಗಿ ಒಂದು ಟೀಮ್ ರಚನೆ ಮಾಡಿದ ಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೇ ಪೊಲೀಸರು ಹಂತಕನ ಪತ್ತೆ ನಡೆಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

